ಕೆಲವು ನೈಸರ್ಗಿಕ ಕ್ರಮಗಳ ಮೂಲಕ ಅಧಿಕ ರಕ್ತದೊತ್ತಡದಿಂದ ಪಾರಾಗಬಹುದು. ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡವು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದ್ದು, ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರನ್ನು ಅಧಿಕ ರಕ್ತದೊತ್ತಡ ಬಾಧಿಸುತ್ತಿದೆ.
ಎಂದು WHO ವರದಿ ಪ್ರಕಾರ, ಭಾರತದ 27 ರಾಜ್ಯಗಳಲ್ಲಿ ಸುಮಾರು 5.8 ಮಿಲಿಯನ್ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 30 ರಿಂದ 79 ವರ್ಷ ವಯಸ್ಸಿನ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು WHO ವರದಿ ಹೇಳಿದೆ.
ಅಧಿಕ ರಕ್ತದೊತ್ತಡದ ಪ್ರಮುಖ ಲಕ್ಷಣಗಳು :
ಆಯಾಸ: ರಕ್ತದೊತ್ತಡ ಹೆಚ್ಚಾದಾಗ ರೋಗಿಯು ಕೆಮ್ಮು ಮತ್ತು ಆಯಾಸವನ್ನು ಅನುಭವಿಸಬಹುದು.
ಎದೆನೋವು: ರಕ್ತದೊತ್ತಡ ಹೆಚ್ಚಾದಾಗ ಎದೆನೋವು ಬರಬಹುದು. ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆ.
ತಲೆತಿರುಗುವಿಕೆ: ರಕ್ತದೊತ್ತಡ ಹೆಚ್ಚಾದಾಗ ವ್ಯಕ್ತಿಯು ತಲೆತಿರುಗುವಿಕೆಯನ್ನು ಅನುಭವಿಸುತ್ತಾನೆ.
ದುರ್ಬಲ ದೃಷ್ಟಿ : ಕಣ್ಣು ಮಂಜಾದಂತೆ ರೋಗಿಯು ದುರ್ಬಲ ದೃಷ್ಟಿಯ ಸಮಸ್ಯೆಯನ್ನು ಅನುಭವಿಸಬಹುದು.
ತಲೆನೋವು: ಅಧಿಕ ರಕ್ತದೊತ್ತಡ ಇರುವ ರೋಗಿಗಳು ತಲೆನೋವಿನಿಂದ ಬಳಲುತ್ತಿರುತ್ತಾರೆ.
ಅಧಿಕ ರಕ್ತದೊತ್ತಡ ನಿಯಂತ್ರಿಸಲು ನೈಸರ್ಗಿಕ ಪರಿಹಾರಗಳು :
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಸಲ್ಫರ್ ಇದೆ, ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಪ್ರತಿದಿನ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸಬೇಕು.
ನಿಂಬೆ ರಸ: ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಕರಿಮೆಣಸು: ಕರಿಮೆಣಸಿನಲ್ಲಿ ಪೊಟ್ಯಾಸಿಯಮ್ ಇದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ತುಳಸಿ: ತುಳಸಿ ಎಲೆಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಯಾಗುತ್ತದೆ.
ಫೈಬರ್ – ಅಧಿಕ ರಕ್ತದೊತ್ತಡ ಇರುವವರು ಫೈಬರ್ಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಏಕೆಂದರೆ ಫೈಬರ್ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಅರ್ಜುನ ತೊಗಟೆ: ಅರ್ಜುನ ತೊಗಟೆಯ ಪುಡಿ ಅಥವಾ ಕ್ಯಾಪ್ಸುಲ್ಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
ಒಮೆಗಾ -3 ಕೊಬ್ಬುಗಳು – ಸಾಲ್ಮನ್, ಮೀನು, ಮ್ಯಾಕೆರೆಲ್ ಮತ್ತು ಅಗಸೆ ಬೀಜಗಳಂತಹ ಒಮೆಗಾ -3 ಆಹಾರವನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ರಕ್ತದೊತ್ತಡ ಇರುವವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ ಮತ್ತು ವೈದ್ಯರ ಸೂಚನೆಯ ಪ್ರಕಾರ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಿ.