ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು : ಸಿದ್ದರಾಮಯ್ಯ

Karnataka: ಆಯವ್ಯಯ ಪತ್ರ ಮಂಡಿಸುವ ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು.  ಒಬ್ಬ ಬಡವ ಖರೀದಿಸುವ (Siddaramaiah tweets about Tax) ಒಂದು ಬೆಂಕಿಪೆಟ್ಟಿಗೆ,

ಮಕ್ಕಳಿಗೆ ಖರೀದಿಸುವ ಒಂದೈದು ರೂಪಾಯಿಯ ಬಿಸ್ಕಿಟ್ ಪೊಟ್ಟಣದ ಬೆಲೆಯಲ್ಲಿಯೂ ತೆರಿಗೆ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ರಾಜ್ಯ ಸರ್ಕಾರದ ವಿರುದ್ದ  ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು,  ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಗಳಿಕೆಯ ತೆರಿಗೆ(Tax) ಹಣ.

ವರಮಾನ ತೆರಿಗೆ ನೀಡುವವರು ಮಾತ್ರ ತೆರಿಗೆದಾರರು ಎನ್ನುವ ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿದೆ.  

ಸರ್ಕಾರ ಮಂಡಿಸುವ ಆಯವ್ಯಯ ಎಂದರೆ ಅದು ಅಂಕಿ ಅಂಶಗಳ ಕಸರತ್ತು ಅಲ್ಲ, ಸರಳವಾಗಿ ಹೇಳುವುದಾದರೆ ಇದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ನಿತ್ಯದ ಬದುಕಿನ ಲೆಕ್ಕ,

ಅವನ ಮನೆಯ ಆಯವ್ಯಯದ ಲೆಕ್ಕ.. ಇದರಲ್ಲಿ ಹಿಂದಿನ ಸಾಧನೆಯ ಲೆಕ್ಕವೂ ಇರಬೇಕು, ಮುಂದಿನ ಯೋಜನೆಗಳ ವಿವರವೂ ಇರಬೇಕು ಎಂದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ,  2018-19ರ ನನ್ನ ಕೊನೆಯ ಬಜೆಟ್ ನಲ್ಲಿ ಹಿಂದಿನ ಐದು ವರ್ಷಗಳ ಸಾಧನೆಗಳ ಸಂಪೂರ್ಣ ವಿವರಗಳನ್ನು ನೀಡಿದ್ದೆ. ಸದನದಲ್ಲಿ ಮಂಡಿಸಿರುವ ಆ ವಿವರ ಅಧಿಕೃತ ದಾಖಲೆಯಾಗಿದೆ.

ಈಗ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರು ನಮ್ಮ ಪ್ರಣಾಳಿಕೆಯ ಭರವಸೆಗಳಲ್ಲಿ ಶೇಕಡಾ 30ರಷ್ಟು ಜಾರಿಗೆ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.  

ಕಳೆದ ಬಜೆಟ್ನಲ್ಲಿ ಬಿಜೆಪಿ ಸರ್ಕಾರ 206 ಹೊಸ ಕಾರ್ಯಕ್ರಮಗಳನ್ನು ಹೇಳಿತ್ತು, ಅದರಲ್ಲಿ ಸುಮಾರು 57 ಕಾರ್ಯಕ್ರಮಗಳನ್ನು ಇವತ್ತಿನ ವರೆಗೆ ಜಾರಿಗೆ ಕೊಡಲು ಆಗಿಲ್ಲ.

ಜನವರಿ ಅಂತ್ಯದವರೆಗೆ ಬಜೆಟ್ ನಲ್ಲಿ(Budget) ತೋರಿಸಿದ ಹಣದಲ್ಲಿ ಖರ್ಚಾದದ್ದು ಕೇವಲ 56% ಮಾತ್ರ.

ಇದನ್ನೂ ಓದಿ: ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದ ಮೇಲೆ ಹಲ್ಲೆ! ಮುಂಬೈ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಾಯಕ

ಒಂದು ತಿಂಗಳಲ್ಲಿ 44% ಹಣ ಖರ್ಚು ಮಾಡಲು ಆಗುತ್ತಾ?  ಯಾವುದೇ ಆಯವ್ಯಯ ಪತ್ರದ ಆತ್ಮ- ಉತ್ತರದಾಯಿತ್ವ ಮತ್ತು ಪಾರದರ್ಶಕತೆ.

ಈ ಎರಡು ಮಾನದಂಡಗಳಲ್ಲಿ ಮುಖ್ಯಮಂತ್ರಿ  ಬೊಮ್ಮಾಯಿ ಅವರು ಮಂಡಿಸಿರುವ ಆಯವ್ಯಯ ಪತ್ರವನ್ನು ನೋಡಿದರೆ ಇದು ಸುಳ್ಳಿನ ಕಂತೆಯಂತೆ ಕಾಣಿಸುತ್ತಿದೆ.

ಹಿಂದಿನ ನಮ್ಮ ಸರ್ಕಾರದ ಆರೂ ಬಜೆಟ್ ನಮ್ಮ ಆಡಳಿತದಂತೆಯೇ ಪಾರದರ್ಶಕವಾಗಿತ್ತು ಮತ್ತು ಜನತೆಗೆ ಉತ್ತರದಾಯಿಯಾಗಿತ್ತು.

ನಮ್ಮ ಐದು ವರ್ಷಗಳ ಸರ್ಕಾರ ವ್ಯಯ ಮಾಡಿದ್ದ ಜನರ ತೆರಿಗೆ ಹಣದ ಪೈಸೆಪೈಸೆ ಲೆಕ್ಕವನ್ನು ಅದೇ ಜನತೆಗೆ ಒಪ್ಪಿಸಿದ್ದೇನೆ. ಜನರಿಗೆ ಸುಳ್ಳು ಹೇಳಿರಲಿಲ್ಲ ಎಂದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ,  ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾಗ ಸಾಂವಿಧಾನಿಕ ಸಂಪ್ರದಾಯದ ಪ್ರಮಾಣದ ಜೊತೆ ಇನ್ನೊಂದು ಪ್ರಮಾಣ ಮಾಡಿದ್ದೆ.

ಅದು ನುಡಿದಂತೆ ನಡೆಯುತ್ತೇನೆ ಎನ್ನುವ ಪ್ರಮಾಣ. ಆ ಪ್ರಮಾಣದಂತೆಯೇ ನಾನು  ನಡೆದುಕೊಂಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ರಾಜ್ಯ ಬಿಜೆಪಿ(BJP) ತನ್ನ ಪ್ರಣಾಳಿಕೆಯ ಶೇಕಡಾ 90ರಷ್ಟು ಭರವಸೆಗಳನ್ನು ಕಳೆದ 4 ವರ್ಷಗಳಿಂದ ಈಡೇರಿಸಿಲ್ಲ,

ನಮ್ಮ ಸರ್ಕಾರ ಪಕ್ಷದ ಪ್ರಣಾಳಿಕೆಯಲ್ಲಿನ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ಸಭಾಧ್ಯಕ್ಷರು ಅವಕಾಶ ನೀಡಿದರೆ ಈ ಎರಡು ಪ್ರಣಾಳಿಕೆಗಳ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು  ಸವಾಲು ಹಾಕಿದ್ದಾರೆ.

Exit mobile version