ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದ್ರೋ ಗೊತ್ತಿಲ್ಲ; ಅವರ ಭವಿಷ್ಯ ನಿಜವಾಗಲ್ಲ: ಈಶ್ವರಪ್ಪ

ಮೈಸೂರು, ಜ. 18: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏಪ್ರಿಲ್ ನಲ್ಲಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ‌. ಅವರು ಯಾವಾಗ ಜ್ಯೋತಿಷಿ ಆದರೋ ಗೊತ್ತಿಲ್ಲ. ಆದರೆ, ಅವರು ನುಡಿದ ಭವಿಷ್ಯ ನಿಜವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕ್ಯಾಲೆಂಡರ್‌ನಲ್ಲಿರುವ ಎಲ್ಲ ತಿಂಗಳಲ್ಲೂ ಸಿಎಂ ಬದಲಾಗ್ತಾರೆ ಅಂತ ಹೇಳುತ್ತಾ ಇರುತ್ತಾರೆ. ಆದರೆ, ಅವರು ನುಡಿವ ಭವಿಷ್ಯ ಎಂದಿಗೂ ನಿಜವಾಗುವುದಿಲ್ಲ ಎಂದರು.

ಮೊದಲು ಗ್ರಾಮ ಪಂಚಾಯಿತಿ ಚುನಾವಣೆ ಆದಮೇಲೆ ಸಿಎಂ ಬದಲಾವಣೆ ಆಗುತ್ತಾರೆ ಅಂತ ಹೇಳಿದ್ದರು. ಅದು ಸುಳ್ಳಾಯಿತು. ಇದೀಗ ಏಪ್ರಿಲ್ ತಿಂಗಳು ಅಂತ ಹೇಳುತ್ತಿದ್ದಾರೆ. ನಂತರ ಮೇ, ಜೂನ್ ಅನ್ನುತ್ತಾರೆ. ಕ್ಯಾಲೆಂಡರ್ ನಲ್ಲಿರುವ ಎಲ್ಲ ತಿಂಗಳನ್ನೂ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

Exit mobile version