ಕೊರೊನಾದಿಂದ ಮೃತಪಟ್ಟ 77 ವಕೀಲರಿಗೆ ಸುಪ್ರೀಂ ಕೋರ್ಟ್ ಗೌರವ ನಮನ

ನವದೆಹಲಿ,ಜೂ.28: ಕೊರೊನಾದಿಂದ ಮೃತಪಟ್ಟ ಸುಪ್ರೀಂಕೋರ್ಟ್‌ನ ವಕೀಲರ ಸಂಘದ 77 ವಕೀಲರಿಗೆ ಸುಪ್ರೀಂಕೋರ್ಟ್‌ ಸೋಮವಾರ ಗೌರವ ನಮನ ಸಲ್ಲಿಸಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ನ್ಯಾಯಾಲಯದ ಎಲ್ಲಾ ನ್ಯಾಯಮೂರ್ತಿಗಳ ಪರವಾಗಿ ಸಂತಾಪ ಸೂಚಿಸಿದರು. ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಷನ್‌ನ (ಎಸ್‌ಸಿಬಿಎ) 77 ವಕೀಲರು ಕೋವಿಡ್‌ನಿಂದ ಸಾವಿಗೀಡಾದ್ದಾರೆ ಎಂದು ಎಸ್‌ಸಿಬಿಎಯ ಕಾರ್ಯದರ್ಶಿ ನಮಗೆ ಮಾಹಿತಿ ನೀಡಿದರು. ಇದಕ್ಕೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ ಎಂದು ಎನ್‌.ವಿ.ರಮಣ ಅವರು ತಿಳಿಸಿದರು.

Exit mobile version