ಚಿಕ್ಕಮಗಳೂರು ಸೆ 21 : ಜಿಲ್ಲೆಯ ನರಸಿಂಹರಾಜಪುರದ ತಹಶೀಲ್ದಾರ್ ಗೀತಾ ಅವರು ವಿವಾಹಿತ ಗ್ರಾಮಲೆಕ್ಕಿಗ ಡಿ.ಟಿ ಶ್ರೀನಿಧಿ ಎಂಬುವವರನ್ನು ಮದುವೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಿ.ಜಿ ಗೀತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ ತಲುಪಿದ ಏಳು ದಿನಗಳೊಳಗೆ ಸೂಕ್ತ ಕಾರಣಗಳನ್ನು ನೀಡದೆ ಇದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದೂರು ನೀಡಿದ ಶ್ರೀನಿಧಿ ಪತ್ನಿ :
2006 ರಲ್ಲಿ ಶ್ರೀನಿಧಿಯವರೊಂದಿಗೆ ನನ್ನ ಮದುವೆಯಾಗಿತ್ತು,ನಮಗೆ ಇಬ್ಬರು ಮಕ್ಕಳಿದ್ದಾರೆ, ಸಣ್ಣ ಪುಟ್ಟ ಸಮಸ್ಯೆಗಳು ನಮ್ಮ ಮಧ್ಯದಲ್ಲಿತ್ತು, ಮಾನಸಿಕ, ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಆ ಕಾರಣದಿಂದಾಗಿ ಈ ಹಿಂದೆ ಕಡೂರು ಠಾಣೆಯಲ್ಲಿ ದೂರು ನೀಡಿದ್ದೆ. ಅಲ್ಲಿನ ಪೊಲೀಸರು ನಮ್ಮನ್ನು ರಾಜಿ ಮಾಡಿದ್ದರು ಎಂದು ಶ್ರೀನಿಧಿ ಅವರ ಪತ್ನಿ ತಿಳಿಸಿದ್ದಾರೆ. ಹಾಗೂ ಶ್ರೀನಿಧಿ ಅವರು ವಿವಾಹ ವಿಚ್ಛೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ