ವಿವಾಹಿತನನ್ನೇ ಮದುವೆಯಾದ ಎನ್‌.ಆರ್‌. ಪುರ ತಹಶೀಲ್ದಾರ್

ಚಿಕ್ಕಮಗಳೂರು ಸೆ 21 :  ಜಿಲ್ಲೆಯ ನರಸಿಂಹರಾಜಪುರದ ತಹಶೀಲ್ದಾರ್ ಗೀತಾ ಅವರು ವಿವಾಹಿತ ಗ್ರಾಮಲೆಕ್ಕಿಗ ಡಿ.ಟಿ ಶ್ರೀನಿಧಿ ಎಂಬುವವರನ್ನು ಮದುವೆಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಿ.ಜಿ ಗೀತಾ ಅವರಿಗೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನೋಟಿಸ್ ತಲುಪಿದ ಏಳು ದಿನಗಳೊಳಗೆ ಸೂಕ್ತ ಕಾರಣಗಳನ್ನು ನೀಡದೆ ಇದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ದೂರು ನೀಡಿದ ಶ್ರೀನಿಧಿ ಪತ್ನಿ :

2006 ರಲ್ಲಿ ಶ್ರೀನಿಧಿಯವರೊಂದಿಗೆ ನನ್ನ ಮದುವೆಯಾಗಿತ್ತು,ನಮಗೆ ಇಬ್ಬರು ಮಕ್ಕಳಿದ್ದಾರೆ, ಸಣ್ಣ ಪುಟ್ಟ ಸಮಸ್ಯೆಗಳು ನಮ್ಮ ಮಧ್ಯದಲ್ಲಿತ್ತು, ಮಾನಸಿಕ, ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಆ ಕಾರಣದಿಂದಾಗಿ ಈ ಹಿಂದೆ ಕಡೂರು ಠಾಣೆಯಲ್ಲಿ ದೂರು ನೀಡಿದ್ದೆ. ಅಲ್ಲಿನ ಪೊಲೀಸರು ನಮ್ಮನ್ನು ರಾಜಿ ಮಾಡಿದ್ದರು ಎಂದು ಶ್ರೀನಿಧಿ ಅವರ ಪತ್ನಿ  ತಿಳಿಸಿದ್ದಾರೆ. ಹಾಗೂ ಶ್ರೀನಿಧಿ ಅವರು ವಿವಾಹ ವಿಚ್ಛೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ

Exit mobile version