• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ತೃತೀಯಲಿಂಗಿ ಜೋಡಿಯ ಮದುವೆಗೆ ಅನುಮತಿ ನಿರಾಕರಿಸಿದ ದೇವಸ್ಥಾನದ ಮಂಡಳಿ : ವರದಿ

Mohan Shetty by Mohan Shetty
in ದೇಶ-ವಿದೇಶ
ತೃತೀಯಲಿಂಗಿ ಜೋಡಿಯ ಮದುವೆಗೆ ಅನುಮತಿ ನಿರಾಕರಿಸಿದ ದೇವಸ್ಥಾನದ ಮಂಡಳಿ : ವರದಿ
0
SHARES
0
VIEWS
Share on FacebookShare on Twitter

Kerala : ಗುರುವಾರ ಕೇರಳದ ಪಾಲಕ್ಕಾಡ್ ಜಿಲ್ಲೆಯ ದೇವಸ್ಥಾನದಲ್ಲಿ ತೃತೀಯಲಿಂಗಿ ದಂಪತಿಗೆ(Temple denies permission) ದೇವಸ್ಥಾನದ ಆವರಣದಲ್ಲಿ ಮದುವೆಯಾಗಲು ಕೋರಿದ ಅನುಮತಿಯನ್ನು ನಿರಾಕರಿಸಿದೆ ಎನ್ನಲಾಗಿದೆ.

Temple denies permission

ನೀಲನ್ ಕೃಷ್ಣ ಮತ್ತು ಅಡ್ವೈಕಾ ಎಂಬ ತೃತೀಯಲಿಂಗಿ ಜೋಡಿಗಳ ವಿವಾಹ(Temple denies permission) ಸಮಾರಂಭವನ್ನು ಗುರುವಾರ ಬೆಳಿಗ್ಗೆ ನಿಗದಿಪಡಿಸಲಾಗಿತ್ತು.

ಆದರೆ ಅವರಿಬ್ಬರ ಆಧಾರ್ ಕಾರ್ಡ್‌ಗಳಲ್ಲಿ ಇಬ್ಬರೂ ಪುರುಷರು ಎಂದು ನಮೂದಿಸಿರುವ ಕಾರಣ ದೇವಾಲಯದಲ್ಲಿ ವಿವಾಹವನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಜೋಡಿಗೆ ತಿಳಿಸಿದ್ದಾರೆ.

ಮದುವೆಗೆ ನಿರಾಕರಿಸಿದ ಕೂಡಲೇ ತೃತೀಯಲಿಂಗಿ ಜೋಡಿ ಮದುವೆಯ ಸ್ಥಳವನ್ನು ಅಂತಿಮವಾಗಿ ಬದಲಾಯಿಸಿಕೊಂಡಿದ್ದಾರೆ ಮತ್ತು ದಂಪತಿಗಳ ಸ್ನೇಹಿತರು ಸ್ಥಳವನ್ನು ಬದಲಾಯಿಸುವಲ್ಲಿ ಶ್ರಮಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/highcourt-dismissed-kantara-petition/

ಮದುವೆ ಮೊದಲು ನಿಶ್ಚಯಗೊಂಡಿದ್ದ ದೇವಸ್ಥಾನದ ಆಡಳಿತ ಮಂಡಳಿ ಬಳಿಕ ನಮ್ಮ ಮದುವೆ ಇಲ್ಲಿ ನಡೆಯುವುದು ಬೇಡವೆಂದು ನಿರಾಕರಿಸಿದರು ಎಂದು ತೃತೀಯಲಿಂಗಿ ಜೋಡಿ ಆರೋಪಿಸಿದೆ.

ಆದ್ರೆ, ಈ ಬಗ್ಗೆ ಸ್ವತಃ ದೇವಸ್ಥಾನದ ಮಂಡಳಿ ಅಧಿಕಾರಿಗಳು ಮಾತನಾಡಿದ್ದು,

ತೃತೀಯ ಲಿಂಗಿ ಜೋಡಿಯ ಮದುವೆ ಮಾಡಲು ನಾವು ಎಲ್ಲಾ ಸಿದ್ಧತೆಗಳನ್ನು ಹಮ್ಮಿಕೊಂಡಿದ್ದೆವು,

ಅಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಅರ್ಚಕರನ್ನು ಕೂಡ ನೇಮಿಸಲಾಗಿತ್ತು.

ಮದುವೆ ಸಮಾರಂಭಕ್ಕೆ ನಾವು ಅನುಮತಿ ನಿರಾಕರಿಸಲಿಲ್ಲ! ಆದರೆ ಅವರಿಬ್ಬರ ಆಧಾರ್ ಕಾರ್ಡಿನಲ್ಲಿ(Aadhar Card) ಇಬ್ಬರು ಪುರುಷರು ಎಂದೇ ನಮೂದನೆಯಾಗಿತ್ತು.

https://youtu.be/cvWkSjzuPg0

ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ದೇವಸ್ಥಾನದ ಮಂಡಳಿಯ ಅಧಿಕಾರಿಗಳು ಮತ್ತು ವಿವಾಹ ನೋಂದಣಿ ವಿಭಾಗದೊಂದಿಗೆ ಮಾತನಾಡಲು ಮಾತ್ರ ನಾವು ಕೇಳಿದೆವು ಅಷ್ಟೇ.

ಈ ದೇವಾಲಯದಲ್ಲಿ ಈ ಹಿಂದೆ ಅಂತಹ ಯಾವುದೇ ಮದುವೆಗಳು ಕೂಡ ನಡೆದಿಲ್ಲ ಮತ್ತು ಅವರು ಸ್ಪಷ್ಟೀಕರಣವನ್ನು ಮಾತ್ರ ಕೇಳಿದ್ದಾರೆಯೇ ಹೊರತು,

ಮದುವೆ ನಡೆಸುವುದು ಬೇಡ ಎಂದು ಎಲ್ಲಿಯೂ ಹೇಳಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಯಾವುದೇ ವಿವಾದವನ್ನು ತಪ್ಪಿಸಲು ನಾವು ದೇವಸ್ಥಾನದ ಮಂಡಳಿಯ ಅಧ್ಯಕ್ಷರು ಮತ್ತು ಇತರರಿಂದ ಅನುಮತಿ ಪಡೆಯಲು ಮಾತ್ರ ಕೇಳಿದ್ದೇವೆ.

ಅಂತಹ ಸಂದರ್ಭದಲ್ಲಿ ದೇವಸ್ಥಾನದ ನೌಕರರು ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ದೇವಸ್ಥಾನದ ಮಂಡಳಿ ಅವರು ತಮ್ಮ ನಿರ್ಧಾರ ಹೇಳುವಷ್ಟರಲ್ಲಿ ಅವರು ಬೇರೆ ದೇವಸ್ಥಾನದ ಸ್ಥಳವನ್ನು ಹುಡುಕಿ ಹೋಗಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ಹೇಳಿದರು.

https://youtu.be/cGcAHe7IqIA ಕೆ.ಆರ್ ರಸ್ತೆಯಲ್ಲಿ ಚೆಂದದ ಬಿದಿರು ಮಾರುವ ಬಡ ಕುಟುಂಬಗಳು.

ಈ ಘಟನೆ ಭಾರಿ ಚರ್ಚೆಗೆ ಕಾರಣವಾದ ಹಿನ್ನೆಲೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಮಲಬಾರ್ ದೇವಸ್ವಂ ಮಂಡಳಿ ತಿಳಿಸಿದೆ.

ವಿವಾದವನ್ನು ಸೃಷ್ಟಿಸಿದ ಬಳಿಕ ದೇವಾಲಯದ ಆಡಳಿತ ಮಂಡಳಿ ಈ ರೀತಿ ಹೇಳಿಕೆ ನೀಡಿದೆ ಮತ್ತು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದೆ ಎಂದು ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/uttarakhand-madarasa/

“ತೃತೀಯಲಿಂಗಿ ಜೋಡಿಗೆ ಮದುವೆಯಾಗಲು ಮತ್ತು ಒಟ್ಟಿಗೆ ವಾಸಿಸಲು ಎಲ್ಲ ಹಕ್ಕಿದೆ. ಹಲವು ತೀರ್ಪುಗಳು ಬಂದರೂ ಸಮಾಜ ಇನ್ನೂ ಬದಲಾಗಿಲ್ಲ.

ಪ್ರತಿಯೊಬ್ಬರೂ ಟ್ರಾನ್ಸ್‌ಜೆಂಡರ್ ಸಮುದಾಯ(Transgender Community) ಮತ್ತು ಅವರ ಹಕ್ಕುಗಳ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಾರೆ.

ಆದ್ರೆ, ನೆಲದ ವಾಸ್ತವತೆಯು ವಿಭಿನ್ನವಾಗಿದೆ ಎಂದು ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ರಂಜಿನಿ ಗುಡುಗಿದ್ದಾರೆ.

Permission Denied

ತಾರತಮ್ಯವನ್ನು ಕೊನೆಗಾಣಿಸಿ ಸಮಾಜದಲ್ಲಿ ಎಲ್ಲರಂತೆ ಬದುಕುವಂತೆ ಉದ್ದೇಶಪೂರಕವಾಗಿ 2015ರಲ್ಲಿ ಟ್ರಾನ್ಸ್‌ಜೆಂಡರ್ ನೀತಿಯನ್ನು ತಂದ ಮೊದಲ ರಾಜ್ಯ ಕೇರಳ ರಾಜ್ಯಕ್ಕೆ ಸಲ್ಲುತ್ತದೆ ಎಂದು ವಾದಿಸಿದರು.

Tags: keralaPalakkadTransgender Marriage

Related News

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 31, 2023
ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !
ದೇಶ-ವಿದೇಶ

ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !

March 28, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023
ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?
ದೇಶ-ವಿದೇಶ

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.