`ಕಲಾವಿದ’ ಈ ವಾರ ತೆರೆಗೆ

`ಕಲಾವಿದ’ ಎನ್ನುವುದು ರವಿಚಂದ್ರನ್ ನಾಯಕರಾಗಿ ನಟಿಸಿದ ಸಿನಿಮಾ ಎಂದು ಎಲ್ಲರಿಗೂ ಗೊತ್ತು. ಅದು ರವಿಚಂದ್ರನ್ ಇತರ ಸಿನಿಮಾಗಳಂತೆ ಹಲವಾರು ಕಾರಣಗಳಿಗೆ ಸುದ್ದಿಯಾಗಿದ್ದ ಚಿತ್ರವಾಗಿತ್ತು. ಆದರೆ ಇದೀಗ ಅದೇ ಹೆಸರಲ್ಲಿ ಈ ವಾರ ಹೊಸ ಚಿತ್ರವೊಂದು ಹೊರಗೆ ಬರುತ್ತಿದೆ. ವಿಶೇಷವಾದ ಕತೆ ಹೊಂದಿರುವ ಈ ಚಿತ್ರವನ್ನು ಶಿವಾನಂದ್ ಎಚ್.ಡಿ ನಿರ್ದೇಶಿಸಿದ್ದಾರೆ.

ನವನಟ ಪ್ರದೀಪ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಕಲಾವಿದ' ಚಿತ್ರಕ್ಕೆ ನಿರ್ಮಾಪಕರು ಕೂಡ ಅವರೇ.ರಣರಣಕ’ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿದ್ದ ಸಂಭ್ರಮ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದ ತಾರಾಗಣದಲ್ಲಿ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂಗು ಸುರೇಶ್, ವರ್ಷಾ, ಮಲ್ಲೇಶ್, ಗುಂಡಮ್ಮ ಖ್ಯಾತಿಯ ಗೀತ, ಶ್ರಿಧರ್, ಜಗದೀಶ್ , ಲೋಕೇಶ್ ಮೊದಲಾದವರು ಇದ್ದಾರೆ. ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣ ಇದೆ. ವಿವೇಕ್ ಚಕ್ರವರ್ತಿ ಮತ್ತು ಪೂರ್ಣಚಂದ್ರ ತೇಜಸ್ವಿಯವರು ಸಂಗೀತ ನೀಡಿದ್ದಾರೆ. ವೆಂಕಿ ಯು ಡಿ ವಿ ಸಂಕಲನ ನಿರ್ವಹಿಸಿದ್ದು ಮತ್ತು ಆರ್ಯ ರೋಷನ್ ಅವರು ನೃತ್ಯ ನಿರ್ದೇಶಕರಾಗಿದ್ದಾರೆ.

Exit mobile version