Africa : ಆಪ್ರಿಕಾದ ದಕ್ಷಿಣ ಪ್ರದೇಶದಲ್ಲಿ ‘ಪೆಟೋಕಾರ್ಪಸ್ ಅಂಗೋಲೆನ್ಸಿಸ್’ (Pterocarpus Angolensis) ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರವೊಂದಿದೆ.
ಈ ಮರ ರಕ್ತ (Blood) ಸುರಿಸುವ ಮೂಲಕ, ‘ಸಸ್ಯಗಳಿಗೆ ಜೀವವಿದೆ’ ಎನ್ನುವ ಜಗದೀಶ ಚಂದ್ರಬೋಸ್ (Jagadeesh Chandrabose) ಅವರ ಸಂಶೋದನೆಯನ್ನು ರುಜುವಾತು ಪಡಿಸಿದೆ.
![facts bloodwood](https://sp-ao.shortpixel.ai/client/to_webp,q_glossy,ret_img,w_499,h_502/https://vijayatimes.com/wp-content/uploads/2022/09/tree.jpg)
ಕಿಯಾಟ್, ಮುನಿಂಗಾ, ಮುಕ್ವಾ ಎಂಬುದು ಈ ಮರಕ್ಕಿರುವ ಸ್ಥಳೀಯ ಹೆಸರುಗಳು. ಆದರೆ ವಿಶ್ವಾದ್ಯಂತ ಇದು ಪ್ರಸಿದ್ದಿಯಾಗಿರುವುದು ‘ಬ್ಲಡ್ ವುಡ್ ಟ್ರಿ’ (Blood Wood Tree) ಎಂದು.
ಈ ಮರದ ಕಾಂಡ ಅಥವಾ ಕೊಂಬೆಯನ್ನು ಕೊಡಲಿಯಿಂದ ಕಡಿದಾಗ, ಅಥವಾ ಕೊಚ್ಚಿದಾಗ ಆ ಜಾಗದಿಂದ ಕೆಂಪು ಬಣ್ಣದ ನೀರು ಹೊರಬರುತ್ತದೆ.
ಇದನ್ನೂ ಓದಿ : https://vijayatimes.com/memes-to-a-comedian-hero-ositha-iheme/
ಈ ನೀರು ಅಂಟಾಂಟಾಗಿದ್ದು, ಪ್ರಾಣಿಗಳ ಮೈಮೇಲೆ ಆದ ಗಾಯದಿಂದ ರಕ್ತ ಸ್ರವಿಸುವುದನ್ನು ನೆನಪಿಗೆ ತರುವ ಇದು ನಿಜವಾದ ರಕ್ತದಂತೆಯೇ ಇರುತ್ತದೆ.
ಅಲ್ಲದೇ ಈ ನೀರಿನ ಬಣ್ಣ ಗಾಡವಾಗಿರುವುದರಿಂದ ಕೆಲವು ಕಡೆ ಬಣ್ಣದ ವಸ್ತುಗಳ ತಯಾರಿಕೆಯಲ್ಲಿ ಇದನ್ನು ಬಳಸಿದರೆ, ಮತ್ತೆ ಕೆಲವೆಡೆ ಪ್ರಾಣಿಯ ಕೊಬ್ಬನ್ನು ಇದರೊಡನೆ ಬೆರೆಸಿ ಅನೇಕ ಸೌಂದರ್ಯ ವರ್ದಕಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ.
![bloodwood tree tree](https://sp-ao.shortpixel.ai/client/to_webp,q_glossy,ret_img,w_559,h_373/https://vijayatimes.com/wp-content/uploads/2022/09/africa.webp)
ಅದೇ ರೀತಿ, ಮೈ ಮೇಲಿನ ಗಾಯಗಳು ಬೇಗ ವಾಸಿಯಾಗಲು ಇದರ ಲೇಪನ ಅತ್ಯಂತ ಉಪಯುಕ್ತ. ಇರಿತದಿಂದಾದ ನೋವಿನ ಉಪಶಮನಕ್ಕೆ, ಮಲೇರಿಯಾ, ಹೊಟ್ಟೆ ಸಂಬಂಧಿ ಕಾಯಿಲೆ,
ಹಲವು ರೀತಿಯ ಜ್ವರ, ಕಣ್ಣಿನ ತೊಂದರೆ ಹಾಗೂ ಬಾಣಂತಿಯರಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಲು ಈ ನೀರಿನ ವೈದ್ಯಕೀಯ ಗುಣವನ್ನು ಬಳಸಿಕೊಂಡು,
ಇದನ್ನೂ ಓದಿ : https://vijayatimes.com/birthday-wishes-to-pm-narendra-modi/
ಔಷದಿಯನ್ನು ತಯಾರಿಸುವ ಪರಿಪಾಟ ಇಲ್ಲಿನ ಜನರಲ್ಲಿದೆ. ಈ ನೀರಿನ ಬಣ್ಣ ಕೆಂಪಾಗಿರುವುದರಿಂದ ರಕ್ತ ಸಂಬಂಧಿ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿದೆ ಎಂಬುದು ಇಲ್ಲಿನವರ ನಂಬಿಕೆ.
ಹಾಗೇ, ಇದರ ಉನ್ನತ ಗುಣಮಟ್ಟ ಹಾಗೂ ಬಣ್ಣದಿಂದಾಗಿ, ಇದರಿಂದ ತಯಾರಿಸಿದ ಪೀಠೋಪಕರಣಗಳು ಹೆಚ್ಚು ಆಕರ್ಷಕ ಮತ್ತು ಹೆಚ್ಚು ಬೆಲೆ ಹೊಂದಿರುವಂತವು.
ಈ ಮರದ ವಿನ್ಯಾಸ ಮತ್ತು ಮೃದುತ್ವದಿಂದಾಗಿ ಇದರಲ್ಲಿ ಕೆತ್ತನೆ ಕಾರ್ಯ ಅತಿ ಸರಾಗವಾಗಿ ನಡೆಯುತ್ತದೆ. ಈ ಮರ ಸುಮಾರು 12 ರಿಂದ 18 ಮೀಟರ್ ಎತ್ತರ ಬೆಳೆಯುತ್ತದೆ. ಇದರ ತೊಗಟೆ ಬಹಳ ಒರಟು. ದಟ್ಟ ಕಂದು ಬಣ್ಣ ಹಾಗೂ ಹಳದಿ ಹೂವುಗಳು ಇದರ ವೈಶಿಷ್ಟ್ಯ.
![Tree Bloodwood tree](https://sp-ao.shortpixel.ai/client/to_webp,q_glossy,ret_img,w_623,h_350/https://vijayatimes.com/wp-content/uploads/2022/09/Vijaya-Times-2022-09-17T144832.412-1024x576.jpg)
ಈ ಮರದ ಕೊಂಬೆಗಳು ಬಹಳ ಎತ್ತರದಲ್ಲಿ ಕವಲೊಡೆಯುವುದರಿಂದ ಸುತ್ತಲೂ ಛತ್ರಿಯಾಕಾರದಲ್ಲಿ ಹರಡುತ್ತವೆ, ಇದು ಮರದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತಿದೆ.
- ಪವಿತ್ರ