ಶ್ರೀನಗರ,ಜೂ.28: ಕೊರೊನಾ ಕಾರಣದಿಂದಾಗಿ ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಂಡಿದ್ದು, ಆನ್ಲೈನ್ನಲ್ಲಿ ದೇವರ ದರ್ಶನ ಪಡೆದು, ಆರತಿ ನೆರವೇರಿಸಲು ಅವಕಾಶ ಮಾಡಿಕೊಡಲಾಗಿದೆ.
ಆನ್ಲೈನ್ ಆರತಿ ಜೂ.28ರಿಂದ ಆಗಸ್ಟ್ 22ರವರೆಗೆ ದಿನದಲ್ಲಿ ಒಂದು ತಾಸು ನಡೆಯಲಿದೆ. ಮುಂಜಾನೆ 6ರಿಂದ 6.30ರವರೆಗೆ ಮತ್ತು ಸಂಜೆ 5.30ರವರೆಗೆ ಕಾಲಾವಕಾಶ ಕೊಡಲಾಗಿದೆ. ಇದು ಶ್ರೀ ಅಮರನಾಥ್ ಜಿ ವೆಬ್ಸೈಟ್, ಆ್ಯಪ್ ಮತ್ತು ಎಂಎಚ್ 1 ಪ್ರೈಮ್ನಲ್ಲಿ ನೇರಪ್ರಸಾರ ಆಗಲಿದೆ.
ಹಿಮಾಲಯದ ಮೇಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಈ ಬಾರಿ ಜೂನ್ 28ರಿಂದ ಪಹಲ್ಗಾಮ್ ಮತ್ತು ಬಲ್ಟಾಲ್ ಮಾರ್ಗದಲ್ಲಿ ಪ್ರಾರಂಭವಾಗಲಿತ್ತು. ಹಾಗೇ ಆಗಸ್ಟ್22ರಂದು ಮುಕ್ತಾಯಗೊಳ್ಳಬೇಕಿತ್ತು.