Bengaluru: ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ವಿವಿಧ ಸಂಘಟನೆಗಳು ನೀಡಿದ್ದ ಬೆಂಗಳೂರು ಬಂದ್ (which org Supports Kar Bandh) ಯಶಸ್ವಿಯಾಗಿರುವ ಬೆನ್ನಲ್ಲೇ ಈಗ ಮತ್ತೆ ಶುಕ್ರವಾರ
ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಬಂದ್ ಎಫೆಕ್ಟ್ ಯಾವ ರೀತಿ ಇರಬಹುದು ಹಾಗೂ ಅಖಂಡ ಕರ್ನಾಟಕ ಬಂದ್ಗೆ ಯಾವ ಯಾವ ಸಂಘಟನೆಗಳೂ ಬೆಂಬಲ ನೀಡಲಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಮ್ಮ ರಾಜ್ಯದ ಕೆಆರ್ಎಸ್ (KRS) ಜಲಾಶಯದಿಂದ ಕಾವೇರಿ ನೀರು ತಮಿಳುನಾಡಿಗೆ (Tamilnadu) ಬಿಡಲೇ ಬೇಕಾದ ಅನಿವಾರ್ಯತೆಗೆ ರಾಜ್ಯ ಸರ್ಕಾರ ಸಿಲುಕಿದೆ. ಕಾವೇರಿ ನದಿ ಪಾತ್ರದ
ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ (Supreme Court) ಆದೇಶಕ್ಕೆ ತಲೆ ಬಾಗಲೇಬೇಕಾದ
ಅನಿವಾರ್ಯತೆಗೆ ಸಿಲುಕಿರುವ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಈ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಿದ್ದು ರೈತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು
ನೀಡಿದ ಬೆಂಗಳೂರು ಬಂದ್ ಕರೆಗೆ (which org Supports Kar Bandh) ಇಡೀ ಬೆಂಗಳೂರು ಸ್ತಬ್ಧವಾಗಿತ್ತು.
ಆದರೆ ಈಗ ಮತ್ತೆ ಎರಡೇ ದಿನಗಳ ನಂತರ ಅಸಮಾಧಾನಗೊಂಡ ಜನರು ರೈತರಿಗೆ ಅನ್ಯಾಯ ಆಗಬಾರದು ಎನ್ನುವ ನಿಟ್ಟಿನಲ್ಲಿ ಕರ್ನಾಟಕ ಬಂದ್ಗೆ (Karnataka Bandh) ಕರೆ ಕೊಡಲಾಗಿದೆ.
ಕಾವೇರಿ ಹೋರಾಟ ವಿಚಾರವಾಗಿ ಎರಡು ಬಣಗಳ ನಡುವೆ ಮೂಡದ ಒಮ್ಮತದಿಂದಾಗಿ ಈ ಒಂದೇ ವಾರದಲ್ಲಿ 29 ನೇ ತಾರೀಖಿನಂದು ಎರಡು ದಿನಗಳ ಅತಂರದಲ್ಲಿ ಬೆಂಗಳೂರು ಅಷ್ಟೇ ಅಲ್ಲದೇ
ಇಡೀ ಕರ್ನಾಟಕ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್ಗೆ ಗೂಡ್ಸ್ ವಾಹನ, ಖಾಸಗಿ ಶಾಲೆಗಳು,ಖಾಸಗಿ ವಾಹನ ಮಾಲೀಕರು, ಲಾರಿ ಮಾಲೀಕರು ಹಾಗೂ ಚಾಲಕರು,
ಆಟೋ ಚಾಲಕರು, ಹಾಗೂ ಖಾಸಗಿ ವಾಹನ ಮಾಲೀಕರು, ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡುವ ಸಾಧ್ಯತೆ ಇದೆ.
150ಕ್ಕೂ ಅಧಿಕ ಸಂಘಟನೆಗಳ ಬೆಂಬಲದಿಂದ ಬೆಂಗಳೂರು ಬಂದ್ ಸಕ್ಸಸ್ ಆಗಿದೆ. ಇನ್ನೂ ಶುಕ್ರವಾರ 29ನೇ ತಾರೀಖಿನಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಇದೇ ತರಹ ರಾಜ್ಯದ
ಎಲ್ಲ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿದರೆ ಬೆಂಗಳೂರು ಬಂದ್ ತರಹ ಕರ್ನಾಟಕ ಬಂದ್ ಕೂಡ ಯಶಸ್ವಿ ಆಗುವ ಸಾದ್ಯತೆ ಇದೆ. ಅತ್ತ ಕರಾವಳಿ, ಉತ್ತರ ಕರ್ನಾಟಕ ಕೂಡ
ಕರ್ನಾಟಕ ಬಂದ್ ಬೆಂಬಲಕ್ಕೆ ನಿಂತಿವೆ.
ಕರ್ನಾಟಕ ಬಂದ್ಗೆ ಯಾವ ಯಾವ ಸಂಘಟನೆಳಿಂದ ಬೆಂಬಲ?
- ಆದರ್ಶ್ ಆಟೋ ಚಾಲಕರ ಸಂಘ,
- ಡಾಕ್ಟರ್ ರಾಜ್ ಕುಮಾರ್ ಸೇನೆ,
- ಓಲಾ ಉಬರ್ ಸಂಘ, ಕನ್ನಡ ಜನ ಶಕ್ತಿ ಕೇಂದ್ರ,
- ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ,
- ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
- ಕರ್ನಾಟಕ ಜನ ಸೈನ್ಯ, ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ,
- ಕುವೆಂಪು ಕಲಾನಿಕೇತನ,ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ಸಂಘಟನೆ,
- ಕರ್ನಾಟಕ ಜನ ಪರ ವೇದಿಕೆ, ಕರುನಾಡ ರೈತ ಸಂಘ,
- ಕರ್ನಾಟಕ ರಾಜ್ಯ ತಮಟೆ ಕಲಾವಿದರ ಒಕ್ಕೂಟ ಹಾಗೂ ಕರ್ನಾಟಕ ಕನ್ನಡ ಸೇವಾ ಸಂಘ,
- ಕರುನಾಡ ಸೇನೆ, ಜನಹಿತ ಕರ್ನಾಟಕ ರಕ್ಷಣಾ ವೇದಿಕೆ,ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಮತ್ತು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ,
ಅಖಿಲ ಕರ್ನಾಟಕ ರಾಜ್ ಕುಮಾರ್ ಅಭಿಮಾನಿಗಳ ಸಂಘ,
- ಕರವೇ ಶಿವರಾಮೇಗೌಡ ಬಣ,ಕನ್ನಡ ಸೇನೆ, ಕನ್ನಡ ಒಕ್ಕೂಟ,ಕನ್ನಡ ಜಾಗೃತಿ ವೇದಿಕೆ,
- ಕರವೇ ಪ್ರವೀಣ್ ಶೆಟ್ಟಿ ಬಣ, ಲಾರಿ ಮಾಲೀಕರ ಸಂಘ, ಕರಾರ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ,
- ಕರ್ನಾಟಕ ವಿಚಾರ ವೇದಿಕೆ, ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸಾಂಸ್ಕೃತಿಕ ಸಂಸ್ಥೆ,
- ಬೆಂಗಳೂರಿಗರು ನಾಗರಿಕರ ಕನ್ನಡ ವೇದಿಕೆ, ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ,
- ಜನ ಶಕ್ತಿ ಕೇಂದ್ರ, ಡಾಕ್ಟರ್ ರಾಜ್ ಕರ್ನಾಟಕ ಜನಪರ ವೇದಿಕೆ,ಕನ್ನಡ ಪರ ಸಂಘಟನೆ,
- ಕ. ಸಾ. ಪ ಬೆಂಗಳೂರು ನಗರ ಜಿಲ್ಲೆ, ದಂಡು ಪ್ರದೇಶ, ಕೈಗಾರಿಕೆ ಒಕ್ಕೂಟ ಜಲಮಂಡಳಿ ಕನ್ನಡ ಸಂಘ, ಕಾಮತ್ ಹೋಟೇಲ್ ಹಾಗೂ ಕರ್ನಾಟಕ ನವ ನಿರ್ಮಾಣ ಸೇನೆ.
- ಜನಪರ ವೇದಿಕೆ, ಕರ್ನಾಟಕ ನವಶಕ್ತಿ, ಆಟೋ ಮಾಲೀಕರ ಸಂಘ, ಮಾರುಕಟ್ಟೆ ಸಂಘ,
- ಕರ್ನಾಟಕ ರಕ್ಷಣಾ ಪಡೆ,ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿ ಸಂಘ,
- ಕನ್ನಡ ಚಳವಳಿ ವೇದಿಕೆ,ರಾಜ್ಯ ಒಕ್ಕಲಿಗರ ಒಕ್ಕೂಟ, ಕನ್ನಡ ಕ್ರಿಯಾ ಸಮಿತಿ,
- ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ನವಜ್ಯೋತಿ ಸಂಘ, ಕಸ್ತೂರಿ ಕನ್ನಡ ಬಳಗ,
- ಅನಕೃ ಕನ್ನಡ ಸಂಘ, ಕನ್ನಡ ವೇದಿಕೆ ಮಹಿಳಾ ಘಟಕ, ಕರ್ನಾಟಕ ನೇಕಾರರ ಹಿತ ರಕ್ಷಣಾ ವೇದಿಕೆ,
- ಕರ್ನಾಟಕ ಕಹಳೆ ಸಮಿತಿ,ಸರ್ವಜ್ಞ ಮಿತ್ರ ವ್ರಂದ, ಕರುನಾಡ ಸೈನ್ಯ ಅಖಿಲ ಕರ್ನಾಟಕ ಪುನೀತ್ ರಾಜ್, ಕುಮಾರ್ ಅಭಿಮಾನಿಗಳ ಸಂಘ,
- ಕನ್ನಡ ವೇದಿಕೆ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸಾಹಿತ್ಯ ಪರಿಷತ್,
- ವಿಶ್ವ ಮಾನವ ಕುವೆಂಪು ಕಲಾ ನಿಕೇತನ, ಕರ್ನಾಟಕ ರಕ್ಷಣಾ ವೇದಿಕೆ, ಕೊಪ್ಪಳ,
- ಕರುನಾಡ ರೈತ ಕಾರ್ಮಿಕರ ರಕ್ಷಣಾ ವೇದಿಕೆ, ಅಖಂಡ ಕರ್ನಾಟಕ ಜನ ಜಾಗೃತಿ ವೇದಿಕೆ,
- ಅಖಿಲ ಕರ್ನಾಟಕ ರಾಜ್ಯ ಕನ್ನಡಾಂಬೆ ಹಿತರಕ್ಷಣಾ ವೇದಿಕೆ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ,
- ಕರ್ನಾಟಕ ಕಾರ್ಮಿಕರು ನಾಗರಿಕರ ವೇದಿಕೆ, ಕನ್ನಡ ಸಂಘಟನೆಗಳ ಒಕ್ಕೂಟ,
- ಕನ್ನಡ ಕೈಗಾರಿಕಾ ಒಕ್ಕೂಟ ಸಂಘ, ಕನ್ನಡ ಸಂಘ, ಕನ್ನಡ ಪ್ರಗತಿಪರ ಹೋರಾಟಗಾರ ಒಕ್ಕೂಟ,
- ಕರ್ನಾಟಕ ಜನ ಸೈನ್ಯ, ಕನ್ನಡ ಪಕ್ಷ ದೊಡ್ಡ ಬಳ್ಳಾಪುರ, ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಘರ್ಜನೆ,
- ವಾಟಾಳ್ ಕನ್ನಡ ಶಕ್ತಿ, ಕರ್ನಾಟಕ ವಿಷ್ಣು ಸೇನೆ,ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ಸ್ವಾಭಿಮಾನಿ ವೇದಿಕೆ,
- ಕನ್ನಡ ಒಕ್ಕೂಟ, ಜೈ ಕರುನಾಡ ವೇದಿಕೆ, ಕರುನಾಡ ಸಂರಕ್ಷಣಾ ವೇದಿಕೆ, ಕಸ್ತೂರಿ ಕನ್ನಡ ಜನ ಪರ ವೇದಿಕೆ,
- ಕರುನಾಡ ಸೇವಕರು, ನರಸಿಂಹ ಪಡೆ, ವಿಶ್ವ ವಿಜಯ ಕನ್ನಡ ವೇದಿಕೆ,
- ಸಂಗೊಳ್ಳಿ ರಾಯಣ್ಣ ಯುವ ಸೇನೆ, ಕರ್ನಾಟಕ ಜಾಗೃತಿ ಸಮಿತಿ, ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಸಂಘ.
- ವಿಶ್ವ ಕನ್ನಡ ಸಾಮ್ರಾಜ್ಯ, ಜಲ ಸಂರಕ್ಷಣಾ ಸೀಮಿತ. ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿವೆ
ಇದನ್ನು ಒದಿ: ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!
- ಮೇಘಾ ಮನೋಹರ ಕಂಪು