ಬೆಂಗಳೂರು, ನ. 20: ಹಲವಾರು ವರ್ಷಗಳಿಂದ ಮ್ಯಾನ್ ಹೋಲ್ ಕೆಲಸವನ್ನು ಪೌರ ಕಾರ್ಮಿಕರಲ್ಲಿ ಮಾಡಿಸುವುದು ರೂಡಿಯಾಗಿತ್ತು. ಮ್ಯಾನ್ ಹೋಲ್ ಶುದ್ಧಿ ಕಾರ್ಯಕ್ಕೆ ಕಾರ್ಮಿಕರನ್ನ ಬಳಕೆ ಮಾಡೋದನ್ನ ಸಂಪೂರ್ಣವಾಗಿ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನ ಜಾರಿಗೊಳಿಸಲು ಸಿದ್ದವಾಗಿದೆ.
ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಈ ಹಿಂದೆಯೇ ಇದ್ದ ಪಿಇಎಂಎಸ್ಆರ್ ಆಕ್ಟ್ನಲ್ಲಿ ಕೆಲವು ತಿದ್ದುಪಡಿ ತಂದಿದ್ದು ಕಾರ್ಮಿಕರು ಮ್ಯಾನ್ ಹೋಲ್ಗೆ ಇಳಿಯುವುದನ್ನು ತಪ್ಪಿಸಲು ಮೆಷೀನ್ಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡುತ್ತಿದ್ದು ಪೌರಾಡಳಿತ ಕಾರ್ಮಿಕರಿಗೆ ಯಂತ್ರಗಳ ಖರೀದಿ ಮಾಡಿಕೊಡಬೇಕೆಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಅವರು ಹೇಳಿದ್ದಾರೆ. ವಿಶ್ವ ಶೌಚಾಲಯ ದಿನವಾದ ಗುರುವಾರದಂದು ಈ ಘೋಷಣೆ ಮಾಡಿದ್ದಾರೆ.