ನೋಟಿಸ್ ನೀಡದೆ ನನ್ನ ಗಂಡನನ್ನು ಎಳೆದುಕೊಂಡು ಹೋಗಿದ್ದಾರೆ : ನಟ ಚೇತನ್ ಪತ್ನಿ!

ನಟ ಚೇತನ್ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ನವರು ನೋಟಿಸ್ ಕೂಡ ನೀಡದೆ ನನ್ನ ಗಂಡನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ನಟ ಚೇತನ್ ಪತ್ನಿ ಮೇಘನಾ ಅವರು ಆರೋಪಿಸಿದ್ದಾರೆ. ಕನ್ನಡ ಪರ, ಸಾಮಾಜಿಕ ಕಾರ್ಯಕರ್ತ ಹಾಗೂ ನಟನಾಗಿರುವ ಚೇತನ್ ಅವರನ್ನು ಯಾವುದೇ ನೋಟಿಸ್ ನೀಡದೇ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಅಪಹರಿಸಿಕೊಂಡು ಹೋಗಲಾಗಿದೆ ಎಂದು ಚೇತನ್ ಪತ್ನಿ ಮೇಘನಾ ಅವರು ತೀವ್ರವಾಗಿ ಆರೋಪಿಸಿದ್ದಾರೆ.

ನಟ ಚೇತನ್ ವಿರುದ್ಧ ಈ ಹಿಂದೆಯೂ ಸಾಕಷ್ಟು ವಿವಾದಗಳು, ಆರೋಪಗಳು ವ್ಯಕ್ತವಾಗುತ್ತಲೇ ಇದ್ದವು. ಈಗ ಅದೇ ರೀತಿ ಚೇತನ್ ಅವರ ಮೇಲೆ ಯಾವುದಾದರೂ ಆರೋಪಗಳು ಕೇಳಿಬಂದಿವೆಯಾ ಎಂದು ನೋಡಿದರೆ ಅದಕ್ಕೆ ಉತ್ತರ ಇಲ್ಲ. ಪೊಲೀಸರು ಯಾವುದೇ ದಾಖಲಾತಿ, ನೋಟಿಸ್ ಅನ್ನು ಲಗ್ಗತ್ತಿಸಿಲ್ಲ ಎಂಬುದು ಆರೋಪದಲ್ಲಿ ವ್ಯಕ್ತವಾಗಿರುವ ಪ್ರಮುಖ ಅಂಶವಾಗಿದೆ. ತಮ್ಮ ಪತಿಯನ್ನು ಪೊಲೀಸರು ನೋಟಿಸ್ ನೀಡದೆ ಕರೆದುಕೊಂಡು ಹೋಗಿರುವ ವಿಚಾರವಾಗಿ ಪತ್ನಿ ಮೇಘನಾ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಮುಂದೆ ಬಂದು ಫೇಸ್ ಬುಕ್ ಲೈವ್ ನಲ್ಲಿ ಆರೋಪ ಮಾಡಿದ್ದಾರೆ. ನಾನು ಮನೆಯಲ್ಲಿ ಇರಲಿಲ್ಲ.

ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಂದು ಪೊಲೀಸರು ಚೇತನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಪೊಲೀಸರು ಬಂದು ಚೇತನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ನಾನು ಮನೆಗೆ ಬಂದಾಗ ಚೇತನ್ ಕಾಣಲಿಲ್ಲ. ಬಳಿಕ ನಮ್ಮ ಮನೆಯಲ್ಲಿ ಕೆಲಸ ಮಾಡುವವರು ನನಗೆ ಹೇಳಿದರು, ಪೊಲೀಸರು ಬಂದು ಚೇತನ್ ಅವರನ್ನು ಕರೆದುಕೊಂಡು ಹೋದರು ಎಂದು. ನನಗೆ ಪೊಲೀಸರು ಉತ್ತರ ನೀಡಬೇಕು ಯಾಕೆ ಯಾವುದೇ ಮಾಹಿತಿ ನೀಡದೆ ಚೇತನ್ ಅವರನ್ನು ಕರೆದುಕೊಂಡು ಹೋದರು ಎಂದು ಹೇಳಿದರು ಜೊತೆಗೆ ಚೇತನ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

Exit mobile version