• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಶೇಷ ಸುದ್ದಿ

ಪ್ರತಿದಿನ 25-50 ಸಾವಿರ ಭಕ್ತರಿಗೆ ಅನ್ನಪ್ರಸಾದ ನೀಡುವ ಧರ್ಮಸ್ಥಳ ಶ್ರೀ ಮಂಜುನಾಥ ದೇಗುಲದ ಮಹಿಮೆ ಅಪಾರ

Mohan Shetty by Mohan Shetty
in ವಿಶೇಷ ಸುದ್ದಿ
Mangaluru
0
SHARES
8
VIEWS
Share on FacebookShare on Twitter

ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು ಅನ್ನದಾನ. ಹಾಗಾಗಿಯೇ ನಮ್ಮ ದೇಶದಲ್ಲಿ ಅನ್ನದಾನಕ್ಕೆ ಬಹಳ ಮಹತ್ವವಿದೆ. ಹಲವಾರು ದೇವಸ್ಥಾನಗಳಲ್ಲಿ, ಪ್ರಸಾದದ ರೂಪದಲ್ಲಿ ಅನ್ನದಾನವನ್ನು ನಡೆಸಲಾಗುತ್ತದೆ. ಅದರಲ್ಲೂ ಧರ್ಮಸ್ಥಳದಲ್ಲಿ(Dharmasthala) ಸಿಗುವ ಅನ್ನಪ್ರಸಾದದ ರುಚಿಯನ್ನು ಸವಿದವರೇ ಬಲ್ಲರು. ಯಾರೇ ಆಗಲಿ ಧರ್ಮಸ್ಥಳಕ್ಕೆ ಹೋದರೆ ಅಲ್ಲಿ ಪ್ರಸಾದ ಸ್ವೀಕರಿಸದೆ ಹಿಂತಿರುಗಿ ಬರುವ ಮಾತೇ ಇಲ್ಲ. ಸಾಕ್ಷಾತ್ ಮಾತೆ ಅನ್ನಪೂರ್ಣೇಶ್ವರಿಯೇ ನೆಲೆಸಿರುವ ಧರ್ಮದ ಕ್ಷೇತ್ರವಾದ ಧರ್ಮಸ್ಥಳ, ಸತ್ಯ ನಿಷ್ಠೆ ಧರ್ಮಕ್ಕೆ ಹೆಸರಾಗಿದೆ.

Temple

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಕ್ಷಿಣ ಭಾರತದ ಆರಾಧ್ಯ ದೈವ ಮಂಜುನಾಥ ಸ್ವಾಮಿ ನೆಲೆಸಿದ್ದಾರೆ. ಸ್ವಾಮಿಯ ದರ್ಶನಕ್ಕೆಂದು ಬರುವ ಭಕ್ತರ ಸಂಖ್ಯೆ ಅಪಾರ. ಹಾಗಾಗಿ, ಧರ್ಮಸ್ಥಳಕ್ಕೆ ಬಂದಂತಹ ಯಾವುದೇ ಭಕ್ತರು ಹಸಿವಿನಿಂದ ಮರಳಿ ಹೋಗಬಾರದು ಎನ್ನುವ ಉದ್ದೇಶದಿಂದ, 1955 ರಿಂದಲೇ ಇಲ್ಲಿ ಅನ್ನದಾನ ಮಾಡಲು ಪ್ರಾರಂಭಿಸಲಾಯಿತು. ಇಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದವರು, ಇಂದಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ(Veerendra Hegde) ತಂದೆಯವರು. ವಿಶಾಲವಾಗಿರುವ ಈ ಭೋಜನ ಸ್ಥಳದಲ್ಲಿ ಒಂದು ದಿನಕ್ಕೆ ಕಡಿಮೆ ಎಂದರೂ 25 ರಿಂದ 50 ಸಾವಿರ ಜನ ಊಟ ಮಾಡುತ್ತಾರೆ!

https://youtu.be/xQLgfgS6LKMu003c/strongu003eu003cbru003e


ಇನ್ನು, ದೀಪೋತ್ಸವದ ಸಂದರ್ಭದಲ್ಲಂತೂ ಹೆಚ್ಚು ಕಡಿಮೆ ಒಂದು ಲಕ್ಷ ಜನ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಧರ್ಮಸ್ಥಳ ಕ್ಷೇತ್ರ ಪ್ರಸಿದ್ಧವಾಗಿರುವುದೇ ಶುಚಿ ರುಚಿಯಾದ ಅನ್ನ ಪ್ರಸಾದದಿಂದ. ಇಲ್ಲಿನ ಅಡುಗೆಯ ಬಗ್ಗೆ ಗಮನಿಸಬೇಕಾದ ವಿಷಯ ಏನು ಎಂದರೆ, ಇಲ್ಲಿ ಮೊದಲು ಆದ್ಯತೆ ನೀಡುವುದೇ ಸ್ವಚ್ಛತೆಗೆ. ನಿಮಗೆ ತಿಳಿದಿರಬಹುದು, ನಮ್ಮ ಧರ್ಮಸ್ಥಳದ ದೇವಸ್ಥಾನದಲ್ಲಿ ಕಾಪಾಡಿಕೊಳ್ಳಲಾಗುತ್ತಿರುವ ಸ್ವಚ್ಚತೆಯ ಬಗ್ಗೆ ಸುಪ್ರೀಂಕೋರ್ಟ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ!
ಹೌದು, ಇಲ್ಲಿ ಬಳಸುವ ಸಾಮಗ್ರಿಯಿಂದ ಹಿಡಿದು ಅಡುಗೆವರೆಗೆ ಎಲ್ಲಾ ಕಡೆಯೂ ಆಧುನಿಕ ತಂತ್ರಜ್ಞಾನವನ್ನೇ ಉಪಯೋಗಿಸುತ್ತಾರೆ.

Manjunatha Swamy

ಕೇವಲ ಒಂದೇ ದಿನಕ್ಕೆ ಸುಮಾರು ಎಂಟೂವರೆ ಸಾವಿರ ಕೆಜಿ ಅಕ್ಕಿ ಬಳಸಿ ಊಟ ತಯಾರು ಮಾಡುತ್ತಾರೆ. ಜೊತೆಗೆ, ಮೂರುವರೆ ಸಾವಿರ ಕೆಜಿ ತರಕಾರಿ ಬಳಸಿ ಸಾಂಬಾರು ಮಾಡಲಾಗುತ್ತದೆ. ಇಲ್ಲಿರುವ ವಿಶಾಲವಾದ ಭೋಜನ ಶಾಲೆಯಲ್ಲಿ ಒಂಬತ್ತು ಸಾಲುಗಳಲ್ಲಿ ಭಕ್ತಾದಿಗಳು ಕೂತು ಊಟ ಮಾಡಬಹುದು. ಒಂದು ಸಾಲಿನಲ್ಲಿ ಕಡಿಮೆ ಎಂದರೂ 400 ಜನ ಕುಳಿತು ಊಟ ಮಾಡಬಹುದು. ಇನ್ನೊಂದು ಮುಖ್ಯವಾದ ವಿಷಯ ಎಂದರೆ, ಧರ್ಮಸ್ಥಳದಲ್ಲಿ ಸಿಗುವಂತಹ ಆನ್ನ ಪ್ರಸಾದ ನಮ್ಮ ದೇಶದ ಬೇರೆ ಯಾವುದೇ ದೇವಸ್ಥಾನಗಳಲ್ಲಿ ಕೂಡ ಸಿಗುವುದಿಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ, ಈ ನಮ್ಮ ಧರ್ಮಸ್ಥಳದ ಅನ್ನ ಪ್ರಸಾದ.

ಇದನ್ನೂ ಓದಿ : https://vijayatimes.com/health-facts-of-brahmi-leaves/u003c/strongu003e


ಹಸಿದವರಿಗೆ ಅನ್ನ ನೀಡುವುದು ಪ್ರತಿಯೊಬ್ಬರು ಪಾಲಿಸಬೇಕಾದ ಧರ್ಮ. ಇಂತಹ ಧರ್ಮ ಪಾಲನೆ ಮಾಡುತ್ತಿರುವ ಧರ್ಮಸ್ಥಳದ ಮಹಿಮೆ ಅಪಾರ. ಇಲ್ಲಿ ನಡೆಯುವ ನಿತ್ಯ ದಾಸೋಹಕ್ಕೆ ಎಂದಿಗೂ ಅಡೆತಡೆಗಳು ಎದುರಾಗುವುದಿಲ್ಲ, ಇದಕ್ಕೆ ಕಾರಣ ಮಾತೆ ಅನ್ನಪೂರ್ಣೇಶ್ವರಿಯ ಅನುಗ್ರಹ ಹಾಗೂ ಮಂಜುನಾಥೇಶ್ವರನ ಕೃಪೆ ಎನ್ನುವುದು ನಂಬಿಕೆ. ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಇನ್ನೂ ಧರ್ಮಸ್ಥಳಕ್ಕೆ ಭೇಟಿ ನೀಡದೆ ಇರುವವರು, ಒಮ್ಮೆ ಧರ್ಮಸ್ಥಳಕ್ಕೆ ಹೋಗಿ, ಅಲ್ಲಿಯ ಅನ್ನ ಪ್ರಸಾದ ಸ್ವೀಕರಿಸಿ ಮಂಜುನಾಥನ ಅನುಗ್ರಹಕ್ಕೆ ಪಾತ್ರರಾಗಿ.

  • ಪವಿತ್ರ
Tags: Anna PrasadamDharmasthalafoodhistorytemple

Related News

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಅನುಜ್ ಚೌಧರಿ ಎಂಬುವರು ವಾಕಿಂಗ್ ಹೊರಟಿದ್ದಾಗ ಗುಂಡಿಕ್ಕಿ ಹತ್ಯೆ
ದೇಶ-ವಿದೇಶ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಅನುಜ್ ಚೌಧರಿ ಎಂಬುವರು ವಾಕಿಂಗ್ ಹೊರಟಿದ್ದಾಗ ಗುಂಡಿಕ್ಕಿ ಹತ್ಯೆ

August 14, 2023
ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆಯಲ್ಲಿ ಇಳಿಕೆ
ಪ್ರಮುಖ ಸುದ್ದಿ

ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆಯಲ್ಲಿ ಇಳಿಕೆ

August 23, 2023
ಮಣಿಪುರದಲ್ಲಿ ಮತ್ತೊಂದು ಭಯಾನಕ ಸಾಮೂಹಿಕ ಅತ್ಯಾಚಾರ ಪ್ರಕರಣ : ಎಫ್‌ಐಆರ್ ದಾಖಲು!
ಪ್ರಮುಖ ಸುದ್ದಿ

ಮಣಿಪುರದಲ್ಲಿ ಮತ್ತೊಂದು ಭಯಾನಕ ಸಾಮೂಹಿಕ ಅತ್ಯಾಚಾರ ಪ್ರಕರಣ : ಎಫ್‌ಐಆರ್ ದಾಖಲು!

August 23, 2023
ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ
ಪ್ರಮುಖ ಸುದ್ದಿ

ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ

August 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.