ನಿಗದಿತ ಸಮಯದೊಳಗೆ ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ ಸದಸ್ಯರನ್ನು ವಜಾಗೊಳಿಸಲು ಶೋಕಾಸ್ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್

Bengaluru (ಜು.10): ಗ್ರಾಮ ಪಂಚಾಯಿತಿ ಸದಸ್ಯರು ಯಾರಾದರೂ ನಿಗದಿತ ಸಮಯದೊಳಗೆ ಆಸ್ತಿ ವಿವರ ಸಲ್ಲಿಸದೇ ಇದ್ದಲ್ಲಿ ಅವರನ್ನು (Highcourt about Grama Panchayat) ಅನರ್ಹಗೊಳಿಸಲು

ಯಾವುದೇ ಶೋಕಾಸ್‌ ನೀಡಿ ವಿವರಣೆ ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ (High Court) ಆದೇಶಿಸಿದೆ. ಕಲಬುರಗಿ (Kalburgi) ಜಿಲ್ಲೆಯ ಆಳಂದ ತಾಲೂಕಿನ ಮೇಘಾ(ಕೆ) ಅವರನ್ನು ಆಸ್ತಿ ವಿವರ

ಸಲ್ಲಿಸದ ಕಾರಣಕ್ಕೆ ಗ್ರಾ.ಪಂ ಸದಸ್ಯ ಸ್ಥಾನದಿಂದ ಅವರನ್ನು ವಜಾಗೊಳಿಸಿತ್ತು. ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ (Suraj Govinda raj) ಅವರು ಕಲಬುರಗಿ ಪೀಠದಲ್ಲಿ ರಾಜ್ಯ ಚುನಾವಣಾ

ಆಯೋಗದ ಆದೇಶ ರದ್ದು ಕೋರಿ ಲಲಿತಾಬಾಯಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಇತ್ತೀಚೆಗೆ ಈ ಆದೇಶ ಮಾಡಿದ್ದಾರೆ.

ಅರ್ಜಿದಾರರು ಆಸ್ತಿ ವಿವರ ಸಲ್ಲಿಸುವುದು ಸಾಂವಿಧಾನಿಕ ಕರ್ತವ್ಯ. ಅವರು ಅದನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.ಅರ್ಜಿದಾರರನ್ನು ಚುನಾವಣಾ ಆಯೋಗ 10 ತಿಂಗಳು ಕಾದ ನಂತರ ನಿಗದಿತ ಅವಧಿ

ಮುಗಿದ ನಂತರ ಗ್ರಾಂ.ಪಂ. ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮ ಸರಿಯಾಗಿದೆ.ಶೋಕಾಸ್‌ ನೋಟಿಸ್‌ ಅನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವ ಮುನ್ನ ನೀಡಿಲ್ಲ ಅಥವಾ ವಿಚಾರಣೆ ನಡೆಸಿಲ್ಲ

ಎಂಬುದು ಅರ್ಜಿದಾರರ ವಾದವಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಆದರೆ, ಯಾವ ಗ್ರಾ.ಪಂ. ಸದಸ್ಯರು ನಿಗದಿತ ಸಮಯದೊಳಗೆ ಆಸ್ತಿ ವಿವರ ಸಲ್ಲಿಸದಿಲ್ಲವೋ ಅವರನ್ನು ಅನರ್ಹಗೊಳಿಸುವ ಮುನ್ನ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿ, ಅವರ ವಾದ ಕೇಳುವ ಅಗತ್ಯವೇ ಇಲ್ಲ.

ಸಲ್ಲಿಸಿದ ಆಸ್ತಿ ವಿವರದಲ್ಲಿ ತಪ್ಪುಗಳು ಕಂಡು ಬಂದಿದ್ದರೆ ಅಥವಾ ಆಸ್ತಿ ವಿವರ ಸಲ್ಲಿಕೆಯಲ್ಲಿ ವಿಳಂಬವಾಗಿರುವುದಕ್ಕೆ ನೀಡಿರುವ ಕಾರಣ ಇದ್ದಲ್ಲಿ ಅದಕ್ಕೆ ನೋಟಿಸ್‌(Notice) ನೀಡಿದ ಬಳಿಕ ಅವರ ವಿವರಣೆ ಕೇಳಬಹುದಾಗಿದೆ

ಎಂದು ತಿಳಿಸಿದ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ (Highcourt about Grama Panchayat) ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2020ರ ಡಿ.22ರಂದು ನಡೆದ ಚುನಾವಣೆಯಲ್ಲಿ (Election) ಅರ್ಜಿದಾರರು ಮೋಘಾ(ಕೆ) ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜ್ಯ ಚುನಾವಣಾ ಆಯೋಗವು ನಿಗದಿತ

ಅವಧಿಯೊಳಗೆ ಆಸ್ತಿ ವಿವರವನ್ನು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ-1992ರ ಸೆಕ್ಷನ್‌ 43ಬಿ(1) ಅಡಿಯಲ್ಲಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಲಲಿತಾಬಾಯಿ ಅವರನ್ನು ಸದಸ್ಯ ಸ್ಥಾನದಿಂದ

ಅನರ್ಹಗೊಳಿಸಿ 2022ರ ಫೆ.14ರಂದು ಆದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು ಈ ಬಗ್ಗೆ ಯಾವುದೇ ವಿಚಾರಣೆ ನಡೆಸಿಲ್ಲ ಮತ್ತು ಸದಸ್ಯ ಸ್ಥಾನದಿಂದ ಅನರ್ಹಗೊಳಿಸುವ ಮುನ್ನ ಶೋಕಾಸ್‌

ನೋಟಿಸ್‌ ನೀಡಿಲ್ಲ ಹಾಗಾಗಿ, ಚುನಾವಣಾ ಆಯೋಗದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಈ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿ ಪಂಚಾಯತ್‌ ರಾಜ್‌ ಕಾಯ್ದೆ-1992ರ ಸೆಕ್ಷನ್‌ 43ಬಿ(1)ರ ಹೇಳುವ ಪ್ರಕಾರ ಮತ್ತು ಕರ್ನಾಟಕ ಗ್ರಾಮ ಸ್ವರಾಜ್‌ ಹೇಳುವ ಪ್ರಕಾರ ಚುನಾಯಿತರಾದ ದಿನಾಂಕ ಅಥವಾ ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ತಿಂಗಳ ಒಳಗೆ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರು ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆಯಲ್ಲಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಆದರೆ ಅರ್ಜಿದಾರರು ಈ ನಿಯಮವನ್ನು ಪಾಲನೆ ಮಾಡಿಲ್ಲ. ಚುನಾವಣಾ ಆಯೋಗದ ಆದೇಶದಲ್ಲಿ ಆದ್ದರಿಂದ ಯಾವುದೇ ಲೋಪವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ರಶ್ಮಿತಾ ಅನೀಶ್

Exit mobile version