ಸಿದ್ದರಾಮಯ್ಯ ಹಳೇ ಚಿತ್ರದಂತೆ, ಮೋದಿಯವರು ಹೊಸ ಚಿತ್ರದಂತೆ : ನಟ ಜಗ್ಗೇಶ್ ವ್ಯಂಗ್ಯ

Bengaluru : ಸಿದ್ದರಾಮಯ್ಯ ಅವರು ಹಳೇ ಸಿನಿಮಾದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಿನಿಮಾದಂತೆ ಎಂದು ಚಿತ್ರ ನಟ, ಬಿಜೆಪಿ ರಾಜ್ಯಸಭೆ ಸದಸ್ಯ ಜಗ್ಗೇಶ್(Actor Jaggesh) ಟೀಕೆ ಮಾಡಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ನಟ ಜಗ್ಗೇಶ್, ಸಿದ್ದರಾಮಯ್ಯ(Jaggesh statement about Siddaramaiah) ಅವರು ಊರೆಲ್ಲಾ ಸುತ್ತಾಡಿದ್ದಾರೆ.

ಅವರು ಕಾಲಿಡದ ಜಾಗವಿಲ್ಲ! ಎಲ್ಲಾ ಕಡೆ ಅವರ ಮುಖ ತೋರಿಸಿದ್ದಾರೆ. ಅವರು ಒಂದು ರೀತಿ ಹಳೇ ಸಿನಿಮಾದಂತೆ,

ಪ್ರಧಾನಿ ಮೋದಿ(Narendra Modi) ಅವರು ಹೊಸ ಸಿನಿಮಾದಂತೆ ಎಂದು ಸಿದ್ದರಾಮಯ್ಯ ಅವರನ್ನು ಅಪಹಾಸ್ಯ ಮಾಡಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ ರವಿ(CT Ravi) ಅವರು, ಸಿದ್ದರಾಮಯ್ಯ ಅವರು ಪಾಕಿಸ್ತಾನದೊಂದಿಗೆ(Pakistan) ಮಾತನಾಡಬೇಕು, ಅವರಿಗೆ ಪಾಕಿಸ್ತಾನ ಸೂಕ್ತ ಎಂದು ವ್ಯಂಗ್ಯವಾಡಿದ್ದರು. ವಿಪಕ್ಷ ನಾಯಕ,

ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ತಮ್ಮ ಮನಸ್ಥಿತಿಗೆ ತಕ್ಕಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಕಿಸ್ತಾನ ಸುರಕ್ಷಿತ ಸ್ಥಳ ಎಂದು ಸಿ.ಟಿ.ರವಿ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ನಟ

ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಿದ್ದರಾಮಯ್ಯ ಅವರ(Jaggesh statement about Siddaramaiah) ವಿರುದ್ಧ ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.

ಪಾಕಿಸ್ತಾನ ನಮಗೆ ಕಂಟಕವಾಗಿದೆ. ಈ ಹಿಂದೆ ನಮಗೆ 24 ಗಂಟೆ ತೊಂದರೆ ನೀಡಿ ಬಾಂಬ್ ಸ್ಫೋಟಿಸುತ್ತಿದ್ದರು. ನಾನು ಸಿದ್ದರಾಮಯ್ಯ ಅವರಿಗೆ ಹೇಳಲು ಬಯಸುವುದು ಇಷ್ಟೇ!

ನೀವು ಇಲ್ಲಿಗೆ ಬಂದು ಮಾತನಾಡಿ ಪಾಕಿಸ್ತಾನದ ಗಡಿಗೆ ಹೋಗಿ ಅವರನ್ನು ಒಪ್ಪಿಸಿ ಎಂದು ಜಗ್ಗೇಶ್ ಹೇಳಿದ್ದಾರೆ.

G20ಗೆ ಹೋಗಿ ಅವರಿಗೆ ಮನವರಿಕೆ ಮಾಡಿ. ನೀವು ಅದನ್ನು ಮಾಡಬಹುದೇ? ಅದು ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನಿಸಿದ ಅವರು,

ಸಿದ್ದರಾಮಯ್ಯ ಅವರು ಎಲ್ಲಾ ಕಡೆ ಹೋಗಿದ್ದಾರೆ. ಎಲ್ಲಾ ಜಾಗಗಳನ್ನು ನೋಡಿದ್ದಾಯಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ

ಸದ್ಯ ಅವರು ಒಂದು ಹಳೇ ಸಿನಿಮಾದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಿನಿಮಾದಂತೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಮುಸ್ಲಿಂ(Muslim) ಪರ ಹೇಳಿಕೆಗಳನ್ನು ಗುರಿಯಾಗಿಸಿಕೊಂಡ ರಾಜ್ಯ ಬಿಜೆಪಿ(BJP) ಸರಣಿ ಆರೋಪಗಳ ಮೂಲಕ ಬೆಂಬಿಡದೆ ಟೀಕಿಸುತ್ತಿದೆ! ಪಕ್ಷದ ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರವೆಂದೇ ಹೇಳಲಾಗುತ್ತಿರುವ ಕೋಲಾರದಿಂದ(Kolar) ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಇಚ್ಛೆಯ ಕುರಿತು ಸಿ.ಟಿ ರವಿ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಪಾಕಿಸ್ತಾನಕ್ಕೆ ಸೀಮಿತ!

ಅವರು ಪಾಕಿಸ್ತಾನ ಸುರಕ್ಷಿತವಾಗಿದೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು. ನನ್ನ ಅಭಿಪ್ರಾಯದಲ್ಲಿ, ಪಾಕಿಸ್ತಾನ ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಾಗಿದೆ ಎಂದು ಸಿ.ಟಿ ರವಿ ಸುದ್ದಿಗಾರರ ಸರಣಿ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ರೀತಿ ಹೇಳಿಕೆ ನೀಡಿದ್ದಾರೆ.

Exit mobile version