ಅಚ್ಚರಿ ಸಂಗತಿ: ಗೋವಾದಲ್ಲಿ ಪತ್ತೆಯಾದ ಅಪರೂಪದ ಪ್ರಾಚೀನ ಕನ್ನಡ ಶಾಸನ

Goa: ಗೋವಾ (Goa)ದ ಕಾಕೋಡಾದಲ್ಲಿರುವ ಮಹಾದೇವ ದೇವಾಲಯದಲ್ಲಿ ಕಂಡುಬಂದಿರುವ ಕನ್ನಡ ಮತ್ತು ಸಂಸ್ಕೃತದಲ್ಲಿ ಬರೆಯಲಾದ 10ನೇ ಶತಮಾನದ ಕದಂಬರ ಕಾಲದ ಅಪರೂಪದ ಪ್ರಾಚೀನ ಕನ್ನಡ ಶಾಸನ @KannadaInscription ಪತ್ತೆಯಾಗಿದೆ.

ಮುರುಗೇಶಿಯವರ ಪ್ರಕಾರ, ಇದರ ಶಿಲಾಶಾಸನವನ್ನು ಕನ್ನಡ ಮತ್ತು ನಾಗರಿ ಅಕ್ಷರಗಳಲ್ಲಿ ಕೆತ್ತಲಾಗಿದ್ದು, ಇದು ಅದೇ ಕಾಲದ ಜಯಸಿಂಹ I ನ ತಳಂಗ್ರೆ ಶಾಸನದ ಸಾಹಿತ್ಯ ಶೈಲಿಯಲ್ಲಿದೆ ಎಂದು ಮುರುಗೇಶಿ (Murugeshi) ಹೇಳಿದ್ದಾರೆ. ಗೋವಾದ ಕದಂಬರು ಕಲ್ಯಾಣದ ಚಾಲುಕ್ಯರ ಅಧೀನರಾಗಿದ್ದರು ಎಂದು ಮುರುಗೇಶಿ ಹೇಳಿದರು.

ಶಾಸನದಲ್ಲಿ ಏನಿದೆ?
ಸ್ವಸ್ತಿ ಶ್ರೀ ಪದದೊಂದಿಗೆ ಶಾಸನವು ಆರಂಭವಾಗುತ್ತಿದ್ದು, ತಳಾರ ನೇವಯ್ಯ ಮಂಡಲವನ್ನು ನಿರ್ವಹಿಸುತ್ತಿದ್ದಾಗ ಅವನ ಮಗ ಗುಂಡಯ್ಯ #Gundaiah ಗೋವಾ ಬಂದರಿನ ಗೋಪುರವನ್ನು ವಶಪಡಿಸಿಕೊಳ್ಳುವ ತಂದೆಯ ಆಸೆಯನ್ನು ಪೂರೈಸಲು ಪ್ರತಿಜ್ಞೆ ಮಾಡಿ ತಂದೆಯ ಆಸೆಯನ್ನು ಪೂರೈಸಿದ ನಂತರ ಹೋರಾಡಿ ಮರಣಹೊಂದಿದನು.

ಈ ದಾಖಲೆಯು ತನ್ನ ಮಗನ ಸಾವಿನ ಬಗ್ಗೆ ದುಃಖಿತ ತಂದೆಯ ಬಾಯಿಯಿಂದ ಬರುವ ಹೇಳಿಕೆಯಾಗಿ ಸಂಯೋಜಿಸಲ್ಪಟ್ಟಿದ್ದು, ಎಂದು ಉಡುಪಿ (Udupi) ಜಿಲ್ಲೆಯ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ ಟಿ.ಮುರುಗೇಶಿ ಅವರು ಶಾಸನವನ್ನು ಅಧ್ಯಯನ ಮಾಡಿ ತಿಳಿಸಿದರು.

ಕದಂಬ ಷಷ್ಠದೇವ 960 AD ಯಲ್ಲಿ ಶಿಲಾಹಾರಗಳಿಂದ ಚಂದಾವರ ನಗರವನ್ನು ವಶಪಡಿಸಿಕೊಂಡ ನಂತರ, ಅವನು ಗೋಪಕಪಟ್ಟಣ (ಈಗಿನ ಗೋವಾ) ಬಂದರನ್ನು ವಶಪಡಿಸಿಕೊಂಡಿದ್ದು, ಚಾಲುಕ್ಯ ಚಕ್ರವರ್ತಿ ತೈಲಪ II ರಾಷ್ಟ್ರಕೂಟ (Tailapa II Rashtrakuta) ರನ್ನು ಉರುಳಿಸಲು ಸಹಾಯಕ್ಕಾಗಿ ಕದಂಬ ಷಷ್ಠದೇವನನ್ನು ಗೋವಾದ ಮಹಾಮಂಡಲೇಶ್ವರನನ್ನಾಗಿ ನೇಮಿಸಿದನು.

ತಳಾರ ನೇವಯ್ಯನ ಮಗನಾದ ಗುಂಡಯ್ಯ ಈ ಯುದ್ಧದಲ್ಲಿ ಭಾಗವಹಿಸಿ ತನ್ನ ಪ್ರಾಣವನ್ನು ಪಣವಾಗಿಟ್ಟು ಬಂದರನ್ನು ಗೆದ್ದಿರಬಹುದು. ಅವನ ತಂದೆ ತನ್ನ ಮಗನ ವೀರೋಚಿತ ಹೋರಾಟದ ಸ್ಮರಣಾರ್ಥ ಕಾಕೋಡದ ಮಹಾದೇವನ ದೇವಾಲಯ (Mahadev Temple)ದಲ್ಲಿ ಶಾಸನವಿರುವ ಸ್ಮಾರಕ ಶಿಲೆಯನ್ನು ನಿರ್ಮಿಸಿರಬಹುದು ಎಂದು ಹೇಳಿದ್ದಾರೆ.

ಶಾಸನವನ್ನು ಕಂಡು ಗೋವಾದ ಪರಿಸರವಾದಿ ರಾಜೇಂದ್ರ ಕೇರ್ಕರ್ (Rajendra Kerkar) ಅವರು, ಮುರುಗೇಶಿ ಅವರಿಗೆ ತಿಳಿಸಿದ್ದು, “ನನಗೆ ಡಾ.ಕೇರ್ಕರ್, ನಿರ್ದೇಶಕ (ಎಪಿಗ್ರಫಿ) ಮುನಿರಥನ ರೆಡ್ಡಿ ಮತ್ತು ಮೈಸೂರಿನ (Mysore) ಎಎಸ್ಐನ ಸಹಾಯಕ ಎಪಿಗ್ರಾಫಿಸ್ಟ್ ನಾಗರಾಜಪ್ಪ ಮತ್ತು ಉಡುಪಿಯ ಕನ್ನಡ ವಿದ್ವಾಂಸರಾದ ಆರ್.ಕೆ. ಮಣಿಪಾಲ್ (R K Manipal) ಅವರು ಶಾಸನವನ್ನು ಓದಲು ಮತ್ತು ಅರ್ಥೈಸಲು ಸಹಾಯ ಮಾಡಿದರು ”ಎಂದು ತಿಳಿಸಿದ್ದಾರೆ.

ಭವ್ಯಶ್ರೀ ಆರ್ ಜೆ

Exit mobile version