ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ : 8 ತಿಂಗಳಲ್ಲಿ 7 ಭಯಾನಕ ಹತ್ಯೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಪ್ರೀತಿ ಮಾಡಿ ಕೊಲೆ ಮಾಡಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ. ನೀನೇ ನನ್ನ ಪ್ರಾಣ, (lovers murders rises Bangalore) ನಿನ್ನ ಜೊತೆ

ಮಾತನಾಡದೆ ದಿನ ಕಳೆಯಲಾಗುವುದಿಲ್ಲ ಎಂದೆಲ್ಲಾ ಹೇಳುತ್ತಿದ್ದವರು ಈಗ ಕೊಲೆಗಡುಕರಾಗಿದ್ದಾರೆ. ಕೈ ಹಿಡಿದ ಪ್ರೇಮಿಗಳ ನಡುವೆ ಜಗಳವಾಗಿ, ಬಗೆಹರಿಯಬಹುದಾದ ಸಣ್ಣ ಪುಟ್ಟ ಸಮಸ್ಯೆಗಳು

ಕೊಲೆಯ ಹಂತ ತಲುಪುತ್ತವೆ. ಮುಂಬೈ (Mumbai), ದೆಹಲಿ (Delhi), ಬೆಂಗಳೂರಿನಂತಹ ಸಿಟಿಯಲ್ಲಿ ಈಗ ಹೆಚ್ಚಿನ ಕೊಲೆಗಳು ನಡೆಯುತ್ತಿವೆ. ಇತ್ತೀಚೆಗೆ ಪ್ರೇಮಿಗಳ ಕೊಲೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ

ವರದಿಯಾಗುತ್ತಿವೆ. ನಗರದಲ್ಲಿ ಲಿವಿಂಗ್ ಟುಗೆದರ್ ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ 8 ತಿಂಗಳಲ್ಲಿ ಬೆಂಗಳೂರಿನಲ್ಲಿ 7 ಕೊಲೆಗಳು ದಾಖಲಾಗಿವೆ.

ಪ್ರಕರಣ-1 (ಅಶೋಕನಗರ ಠಾಣಾ ವ್ಯಾಪ್ತಿ) :

ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಜಗಳ, ಗೆಳತಿಗೆ ಚಾಕುವಿನಿಂದ ಇರಿದ ಪ್ರೇಮಿ. ನದೀಮ್ ಪಾಷಾ ಎಂಬಾತ ಕೌಸರ್ ಎಂಬ ಯುವತಿಯನ್ನು ಕೊಲೆ ಮಾಡಿದ್ದ. ದಂಪತಿಗಳು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.

ನದೀಮ್ ಪಾಷಾ ಚಿನ್ನದ ಸರಗಳ ಬದಲು ಬೆಳ್ಳಿ ಸರ ತಂದುಕೊಟ್ಟಿದ್ದಕ್ಕೆ ಕೌಸರ್ ಜಗಳ ಶುರು ಮಾಡಿದ್ದಳು. ಈ ಜಗಳ ವಿತರೀತಕ್ಕೆ ಹೋಗಿ ಕೊನೆಗೆ ಆ ಯುವಕ ಪ್ರೇಯಸಿಯನ್ನು ಕೊಲೆ ಮಾಡಿದ್ದ.

ಅಶೋಕನಗರ ಠಾಣೆ ಪೊಲೀಸರು ಆರೋಪಿಯನ್ನು (lovers murders rises Bangalore) ಬಂಧಿಸಿದ್ದರು.

ಪ್ರಕರಣ-2 (ಅಮೃತಹಳ್ಳಿ ಠಾಣಾ ವ್ಯಾಪ್ತಿ) :

“ಲಿವಿಂಗ್ ಟು ಗೆದರ್​ನಲ್ಲಿದ್ದ ಯುವತಿ ಮತ್ತೊಬ್ಬ ಯುವಕನ ಜೊತೆ ಸ್ನೇಹ ಬೆಳೆಸಿದ್ದಳು ಆದ್ದರಿಂದ ಆ ಯುವತಿಯ ಜೊತೆ ಸ್ನೇಹದಿಂದಿದ್ದ ವ್ಯಕ್ತಿಯನ್ನು ಪ್ರಿಯತಮ ಕೊಂದು ಹಾಕಿದ್ದ. ಸುಲೇಮಾನ್

ಎಂಬಾತನನ್ನು ವಿಕ್ಟರ್ ಎಂಬ ಆರೋಪಿ ಕೊಲೆ ಮಾಡಿದ್ದಾನೆ. ಆರೋಪಿಯು ಹಲವು ವರ್ಷಗಳಿಂದ ತನ್ನ ಪ್ರೆಯಸಿಯ ಜೊತೆ ವಾಸಿಸುತ್ತಿದ್ದ. ವಿಕ್ಟರ್‌ನ ಪ್ರೇಮಿ ಸುಲೇಮಾನ್‌ನೊಂದಿಗೆ ಸಂಬಂಧ ಬೆಳೆಸಿದ್ದಳು

ಇದನ್ನು ತಿಳಿದ ಸುಲೇಮಾನ್ ಆತನನ್ನು ಕೊಲೆ ಮಾಡಿದ್ದಾನೆ. ಆತನನ್ನು ಹಲವು ಬಾರಿ ಇರಿದು ಕೊಲ್ಲಲಾಯಿತು.

ಇದನ್ನು ಓದಿ: ಸಂಸದೆ ಪ್ರಜ್ಞಾ ಠಾಕೂರ್‌ ಜೊತೆ ‘ಕೇರಳ ಸ್ಟೋರಿ’ ಸಿನೆಮಾ ನೋಡಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ

ಪ್ರಕರಣ-3 (ಜ್ಞಾನ ಭಾರತಿ ಠಾಣಾ ವ್ಯಾಪ್ತಿ) :

ಈ ಮೊದಲು ಲಿವಿಂಗ್ ಟು ಗೆದರ್​ನಲ್ಲಿದ್ದ ತನ್ನ ಹಳೇ ಪ್ರಿಯತಮ ಮಹಿಳೆಗೆ ಕರೆ ಮಾಡಿ ಒಬ್ಬ ಕೊಲೆಯಾಗಿದ್ದಾನೆ. ಶ್ರೀಕಾಂತ್ ಎಂಬಾತನನ್ನು ಅರುಣ್ ಕುಮಾರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ.

ಹಿಂದೆ ಶ್ರೀಕಾಂತ್ ಜೊತೆ ಲಿವಿಂಗ್ ಟು ಗೆದರ್​ನಲ್ಲಿದ್ದ ಮಹಿಳೆ ಆತನೊಂದಿಗೆ ಜಗಳವಾಡಿಕೊಂಡು ಆರೋಪಿ ಅರುಣ್ ಕುಮಾರ್ ಜೊತೆ ವಾಸವಾಗಿದ್ದಾಳೆ.

ಈ ವೇಳೆ ಹಳೆ ಪ್ರೇಮಿ ಶ್ರೀಕಾಂತ್ ಪದೇ ಪದೇ ಮಹಿಳೆಗೆ ಕರೆ ಮಾಡಿದ್ದ. ಇದನ್ನು ತಿಳಿದ ಅರುಣ್ ಶ್ರೀಕಾಂತ್ ನನ್ನು ಕೊಂದಿದ್ದಾನೆ. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಕರಣ-4 (ಪರಪ್ಪನ ಅಗ್ರಗಾರ ಠಾಣಾ ವ್ಯಾಪ್ತಿ)

ಆರೋಪಿ ಪ್ರಶಾಂತ್ ಮದುವೆಯಾಗು ಎಂದಿದ್ದಕ್ಕೆ ಸುನೀತಾ ಎಂಬಾಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಪರಪ್ಪ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಲವಾರು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ

ಸುನೀತಾ ಮತ್ತು ಪ್ರಶಾಂತ್ ಇಷ್ಟು ದಿನ ಹೀಗೆಯೇ ಬದುಕಿದ್ದು ಸಾಕು ಆದಷ್ಟು ಬೇಗ ಮದುವೆ ಆಗೋಣ ಎಂದು ಸುನೀತಾ ಹಠ ಹಿಡಿದಿದ್ದಾರೆ. ಇಬ್ಬರ ನಡುವಿನ ಜಗಳದಿಂದಾಗಿ ಆರೋಪಿ ತನ್ನ ಪ್ರಿಯತಮೆಯ ಕತ್ತು ಹಿಸುಕಿ

ಕೊಂದು ತಾನೂ ನೇಣು ಬಿಗಿದುಕೊಂಡಿದ್ದಾನೆ.

ಪ್ರಕರಣ-5 (ರಾಮಮೂರ್ತಿ ನಗರ ಠಾಣಾ ವ್ಯಾಪ್ತಿ)

ನೇಪಾಳದ ಕೃಷ್ಣ ಕುಮಾರಿ ಎಂಬಾಕೆಯನ್ನ ಪ್ರೇಮಿ ಸಂತೋಷ್, ಆಕೆಯ ತಲೆಗೆ ರಾಡ್​ನಿಂದ ಹೊಡೆದು ಕೊಂದಿದ್ದಾನೆ. ಅವರಿಬ್ಬರು ಹಲವಾರು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಕೃಷ್ಣಕುಮಾರಿಯ ಮೇಲೆ

ಅನುಮಾನಗೊಂಡ ಆರೋಪಿ ಸಂತೋಷ್ ಇದೇ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ. ಈ ವೇಳೆ ರಾಡ್​ನಿಂದ ತಲೆಗೆ ಹೊಡೆದು ಕೃಷ್ಣಕುಮಾರಿ ಮೃತಪಟ್ಟಿದ್ದಾರೆ.

ಪ್ರಕರಣ-6 (ಜೀವನ್ ಭೀಮನಗರ)

ಅರ್ಪಿತ್ ಎಂಬಾತ ಆಕಾಂಕ್ಷಾ ಎಂಬ ತನ್ನ ಪ್ರೇಮಿಯನ್ನು ಉಸಿರುಗಟ್ಟಿಸಿ ಕೊಂದ.

ಪ್ರಕರಣ-7 (ಬಸವೇಶ್ವರ ನಗರ)

ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ನಾಗರತ್ನಳನ್ನು ಆಕೆಯ ಮರ್ಮಾಂಗಕ್ಕೆ ಇರಿದು ಆರೋಪಿ ಅಯ್ಯಪ್ಪ ತನ್ನ ಪ್ರೇಮಿಯನ್ನು ಕೊಂದಿದ್ದಾನೆ. ಆರೋಪಿಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version