ಹೆಂಡತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಇದ್ದಾರೆಂಬ ಅಸೂಯೆ ಮತ್ತು ಕೀಳರಿಮೆಯಿಂದ ಮಕ್ಕಳ ಎದುರೇ ಪತ್ನಿಯನ್ನು ಕೊಂದ ಉದ್ಯಮಿ

Lucknow (ಆಗಸ್ಟ್‌ 14, 2023) : ಉತ್ತರ ಪ್ರದೇಶದ (murder motivated by Instagram) ಲಖನೌನ ದಲ್ಲಿ (Lucknow) 37 ವರ್ಷದ ಉದ್ಯಮಿಯೊಬ್ಬರು ತನ್ನ ಪತ್ನಿಯನ್ನು ಹತ್ಯೆ

ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಸುಲ್ತಾನ್‌ಪುರದ (Sulthanpura) ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ (Expressway) ತನ್ನ ಇಬ್ಬರು ಮಕ್ಕಳ ಎದುರೇ ಪತ್ನಿಯನ್ನು

ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇವರಿಬ್ಬರಿಗೂ ಮದುವೆ ಆಗಿ 15 ವರ್ಷ ಆಗಿತ್ತು ಆದರೆ, ಅವರ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದರಿಂದ ಅಸೂಯೆ

ಮತ್ತು ಕೀಳರಿಮೆ ಹೆಚ್ಚಾಗಿದ್ದರಿಂದ ಈ ಕೊಲೆಗೆ ಪ್ರೇರಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಪತಿಯೇ ಪತ್ನಿಯನ್ನು ಕೊಲೆ ಮಾಡುವ ಪ್ರಕರಣಗಳು ಅಥವಾ ಹೆಂಡತಿ – ಗಂಡನನ್ನು ಸಾಯಿಸುವುದು ಹೆಚ್ಚಾಗ್ತಿದೆ. ಪತ್ನಿಯ ಪ್ರಾಣಕ್ಕೆ ಆಕೆಯ ಮೊಬೈಲ್‌(Mobile) ಗೀಳು ಸಂಚಕಾರ

ತಂದಿರುವ ಘಟನೆ ಇತ್ತೀಚೆಗೆ ಮಂಡ್ಯದಲ್ಲಿ (murder motivated by Instagram) ಕೂಡ ನಡೆದಿತ್ತು

ಸದ್ಯ ಮೃತ ಪತ್ನಿಯ ಇನ್‌ಸ್ಟಾಗ್ರಾಮ್ ಖಾತೆಯು ಪ್ರಸ್ತುತ ಲಾಕ್ (Lock)ಆಗಿದೆ ಮತ್ತು ಖಾಸಗಿಯಾಗಿದೆ(Private) ಮತ್ತು ಅಧಿಕಾರಿಗಳು ಇನ್ನೂ ಹಿನ್ನೆಲೆಯನ್ನು ಪರಿಶೀಲಿಸಬೇಕಾಗಿದೆ.

ಜೊತೆಗೆ ಪತ್ನಿ ತನ್ನ ಪತಿಯ ಖಾತೆಯನ್ನು ಬ್ಲಾಕ್(Block) ಮಾಡಿದ್ದಾಳೆ. ಇದು ಗಂಡನ ಅಭದ್ರತೆಯನ್ನು ಹೆಚ್ಚಾಗುವಂತೆ ಮಾಡಿತ್ತು ಇದಲ್ಲದೆ, ನನ್ನ ಅನುಪಸ್ಥಿತಿಯಲ್ಲಿ ಅವರ ಕೆಲವು ಸಾಮಾಜಿಕ

ಮಾಧ್ಯಮ (Social Media) ಅನುಯಾಯಿಗಳು(Followers) ತನ್ನ ಹೆಂಡತಿಯನ್ನು ಭೇಟಿ ಮಾಡುತ್ತಾರೆ ಎಂದು ಆರೋಪಿಯು ಶಂಕಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಆದ್ದರಿಂದ ಅವರ

ಸಂಬಂಧವು ಸ್ವಲ್ಪ ಸಮಯದವರೆಗೆ ಹದಗೆಟ್ಟಿತ್ತು.

ಇದನ್ನೂ ಓದಿ : ಬೆಳ್ತಂಗಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೆ ಬಲಿ! ಸಣ್ಣ ವಯಸ್ಸಿನವರಿಗೆ ದ.ಕ ಜಿಲ್ಲೆಯಲ್ಲಿ ಹಾರ್ಟ್ ಅಟ್ಯಾಕ್ ಹೆಚ್ಚಳ!

ಈ ಘಟನೆ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಕುರೇಭಾರ್ ಎಸ್‌ಎಚ್‌ಒ (SHO) ಪ್ರವೀಣ್ ಕುಮಾರ್ ಯಾದವ್ (Praveen Kumar Yadav) ಈ ಬಗ್ಗೆ ಮಾತನಾಡಿ ಈ ಆರೋಪಿಯು ಟೂರ್ ಮತ್ತು

ಟ್ರಾವೆಲ್ ಏಜೆನ್ಸಿಯನ್ನು (Tour and Travel agency) ಈ ಆರೋಪಿಯು ಹೊಂದಿದ್ದು, ಆತನ ಪತ್ನಿ ಗೃಹಿಣಿಯಾಗಿದ್ದು, ದಂಪತಿಗೆ 12 ವರ್ಷದ ಮಗಳು ಮತ್ತು 5 ವರ್ಷದ ಮಗನ ಜೊತೆ ಲಖನೌನ ಪ್ಯಾರಾ

ಪ್ರದೇಶದಲ್ಲಿ ವಾಸಿಸುತ್ತಿದ್ದರು’’ ಎಂದು ಹೇಳಿದ್ದಾರೆ.

ದಂಪತಿ ರಾಯ್ ಬರೇಲಿಗೆ ಭಾನುವಾರ(Sunday) ಬೆಳಗ್ಗೆ ಪ್ರಯಾಣ ಬೆಳೆಸಿದರು. ಆದರೆ, ದಾರಿ ಮಧ್ಯದಲ್ಲಿ ಕಾರನ್ನು ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗೆ ತಿರುಗಿಸಿದರು.ಸುಲ್ತಾನ್‌ಪುರದ ಮುಜೇಶ್ ಇಂಟರ್‌ಸೆಕ್ಷನ್‌

ಬಳಿ ಮುಂಜಾನೆ 5 ಗಂಟೆ ಸುಮಾರಿಗೆ ಆರೋಪಿ ತನ್ನ ಪತ್ನಿಯೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದ. ಪತಿ ಮಾರಣಾಂತಿಕವಾಗಿ ಕೋಪದ ಭರದಲ್ಲಿ, ಪತ್ನಿಯ ಕತ್ತು ಹಿಸುಕಿದ್ದಾನೆ. ತಮ್ಮ ಕಣ್ಣ ಮುಂದೆಯೇ

ಇಂತಹ ಭಯಾನಕ ದೃಶ್ಯವನ್ನು ನೋಡಿ ಮಕ್ಕಳು ಆಘಾತಕ್ಕೊಳಗಾಗಿ ಅಳಲು ಆರಂಭಿಸಿದ್ದಾರೆ. ನಂತರ ಎಸ್‌ಯುವಿಯಲ್ಲೇ(SUV) ತನ್ನನ್ನು ತಾನು ಆರೋಪಿ ಲಾಕ್‌ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುತ್ತಿದೆ ಅನೇಕ ಸುಳ್ಳು ಪ್ರಕರಣಗಳು : ಹೈಕೋರ್ಟ್ ಕಿಡಿ

ವಾಹನ ಅನುಮಾನಾಸ್ಪದವಾಗಿ ನಿಂತಿದ್ದನ್ನು ಗಸ್ತು ತಿರುಗುತ್ತಿದ್ದ ತಂಡವೊಂದು ಗಮನಿಸಿದಾಗ ಅನುಮಾನ ಮೂಡಿದೆ. ಹತ್ತಿರದ ಪೊಲೀಸ್ ಠಾಣೆಗೆ(Police station) ಅವರು ತಕ್ಷಣವೇ ಎಚ್ಚರಿಕೆ ನೀಡಿದರು.

ಆ ಕೂಡಲೇ ಘಟನೆ ನಡೆದ ಸ್ಥಳಕ್ಕೆ ಕಾನೂನು ಜಾರಿ ಅಧಿಕಾರಿಗಳು ಆಗಮಿಸಿದ್ದು, ಬಳಿಕ ತನ್ನ ತಾಯಿಯನ್ನು ತಂದೆಯೇ ಕೊಂದಿದ್ದಾರೆ ಎಂಬ ಭಯಾನಕ ಸತ್ಯವನ್ನು ದಂಪತಿಯ ಮಗಳು ಬಹಿರಂಗಪಡಿಸಿದಳು.

ಕೂಡಲೇ ಆರೋಪಿಯನ್ನು ಆಕೆಯ ಸಾಕ್ಷ್ಯದ ಆಧಾರದ ಮೇಲೆ ಬಂಧಿಸಲಾಯಿತು ಎಂದು ತಿಳಿದುಬಂದಿದೆ.

ಮಂಡ್ಯದಲ್ಲಿ ನಡೆದ ಘಟನೆ

ತನ್ನ ಮೊಬೈಲ್‌ ಗೀಳೇ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ (Reels)ಮಾಡ್ತಿದ್ದ ಹೆಂಡತಿಯ ಜೀವಕ್ಕೆ ಆಪತ್ತು ತಂದಿಟ್ಟಿದೆ. ರೀಲ್ಸ್‌ ಮಾಡುತ್ತಿದ್ದ ಜೊತೆ ಜೊತೆಗೆ ಈಕೆ ಇದೇ ವೇಳೆ ತನ್ನ ಸ್ನೇಹಿತರೊಂದಿಗೆ ಚಾಟಿಂಗ್‌

(Chatting) ಮಾಡುವ ಅಭ್ಯಾಸವನ್ನು ಕೂಡ ಇರಿಸಿಕೊಂಡಿದ್ದಳು. ಗಂಡನಿಗೆ ಆಕೆಯ ರೀಲ್ಸ್‌ನ ಅಭ್ಯಾಸವನ್ನು ನೋಡಿ ಮತ್ತು ಪತ್ನಿಯ ಅತಿಯಾದ ಮೊಬೈಲ್‌ ಗೀಳು ಅನುಮಾನ ಶುರುವಾಗಿತ್ತು. ಮಂಡ್ಯ ಜಿಲ್ಲೆ

ಶ್ರೀರಂಗಪಟ್ಟಣ (Sriranga pattana)ತಾಲ್ಲೂಕಿನ ಮಂಡ್ಯಕೊಪ್ಪಲುವಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸಿದ ಆತ,

ಕೊಂದಿರುವ ಘಟನೆ ನಡೆದಿದೆ. ಗಂಡನಿಂದಲೇ ಕೊಲೆಯಾಗಿರುವ ಮಹಿಳೆ 26 ವರ್ಷದ ಪೂಜಾ(Pooja), ಈಕೆಯ ಗಂಡ 33 ವರ್ಷದ ಶ್ರೀನಾಥ್‌(Srinath) ಕುತ್ತಿಗೆ ಬಿಗಿದು ಪತ್ನಿಯ ವೇಲ್‌ನಿಂದಲೇ

ಕೊಂದಿರುವ ಘಟನೆ ನಡೆದಿದೆ.

ರಶ್ಮಿತಾ ಅನೀಶ್

Exit mobile version