2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲದ ಮಂಡಿಯಿಂದ ಸ್ಪರ್ಧಿಸಲು ನಾನು ಸಿದ್ಧ : ಕಂಗನಾ ರಣಾವತ್

Himachal Pradesh : 2024ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ (Ready To Join Politics) ಮಂಡಿಯಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ಬಾಲಿವುಡ್ ಹಾಟ್ ನಟಿ ಕಂಗನಾ ರಣಾವತ್(Kangana Ranaut) ಅಧಿಕೃತವಾಗಿ ಘೋಷಿಸಿದ್ದಾರೆ.

ಸಾರ್ವಜನಿಕರು ಬಯಸಿದಲ್ಲಿ ಮತ್ತು ಬಿಜೆಪಿ(BJP) ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧವಿದ್ದೇನೆ ಎಂದು ಕಂಗನಾ ಬಹಿರಂಗವಾಗಿ ಹೇಳಿದ್ದಾರೆ.

ನಟಿ ಕಂಗನಾ ರಣಾವತ್ ರಾಜಕೀಯ ಸೇರುವ ಸುಳಿವು ನೀಡಿದ್ದು, ಈ ಬಗ್ಗೆ ಸ್ವತಃ ಮಾತನಾಡಿ, “ನಾನು ಎಲ್ಲಾ ರೀತಿಯ ಭಾಗವಹಿಸುವಿಕೆಗೆ ತುಂಬಾ ಮುಕ್ತಳಾಗಿರುತ್ತೇನೆ” ಎಂದು ಹೇಳಿದ್ದಾರೆ.

ಇನ್ನು ರಾಜಕೀಯಕ್ಕೆ ಪ್ರವೇಶಿಸುವ ಮೂಲಕ ಸಾರ್ವಜನಿಕ ಸೇವೆ ಮಾಡಲು ನೀವು ಮುಕ್ತರಾಗಿದ್ದೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಂಗನಾ,

ಎಲ್ಲಾ ರೀತಿಯ ಭಾಗವಹಿಸುವಿಕೆಗೆ ತುಂಬಾ ಮುಕ್ತವಾಗಿದ್ದೇನೆ ಎಂದು ಹೇಳಿದರು. ಹಿಂದಿಯಲ್ಲಿ ಮಾತನಾಡಿದ ನಟಿ ಕಂಗನಾ,

ಇದನ್ನೂ ಓದಿ : https://vijayatimes.com/fan-letter-to-power-star/

“ಜಿಸ್ ತಾರಾಹ್ ಕೆ ಹಾಲತ್ ಹೋಂಗೆ, ಸರ್ಕಾರಿ ಚಾಹೇಗಿ ಮೇರಾ ಭಾಗವಹಿಸುವಿಕೆ ಹೋ, ವೋ ನಾನು ಎಲ್ಲಾ ರೀತಿಯ ಭಾಗವಹಿಸುವಿಕೆಗೆ ತುಂಬಾ ಮುಕ್ತಳಾಗಿರುತ್ತೇನೆ” ಎಂದರು.

ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿಕೊಂಡು ಕೇಳುವುದಾದರೆ,

“ನಾನು ಹೇಳಿದಂತೆ, ಹಿಮಾಚಲ ಪ್ರದೇಶದ ಜನರು ನನಗೆ ಸೇವೆ ಮಾಡಲು ಅವಕಾಶ ನೀಡಿದರೆ ಅದು ನನಗೆ ಬಹಳ ಅನುಕೂಲವಾಗುತ್ತದೆ. ಆದ್ದರಿಂದ, ಖಂಡಿತವಾಗಿ ಅದು ನನ್ನ ಸೌಭಾಗ್ಯ” ಹೇಳಿದ್ದಾರೆ.

ಇದೇ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಕುರಿತು ಮಾತನಾಡಿದ ಕಂಗನಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ, ‘ಮಹಾಪುರುಷ’ ಎಂದು ಹೇಳಿದರು.

“ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ(Rahul Gandhi) ಇಬ್ಬರೂ ಪ್ರತಿಸ್ಪರ್ಧಿಗಳಾಗಿರುವುದು ದುಃಖಕರವಾಗಿದೆ. ಆದರೆ, ಮೋದಿಜಿ ಅವರಿಗೆ ಯಾವುದೇ ಎದುರಾಳಿ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.

” ಆಮ್ ಆದ್ಮಿ ಪಕ್ಷದ ಸುಳ್ಳು ಭರವಸೆಗಳಿಗೆ ಹಿಮಾಚಲ ಪ್ರದೇಶ ಎಂದಿಗೂ ಬೀಳುವುದಿಲ್ಲ.

https://www.facebook.com/Vijayatimeskannada/videos/1575287249571694/

ಹಿಮಾಚಲದ ಜನರು ತಮ್ಮದೇ ಆದ ಇನ್ ಸೌರ ಸೌರಶಕ್ತಿಯನ್ನು ಹೊಂದಿದ್ದಾರೆ ಮತ್ತು ಜನರು ತಮ್ಮದೇ ಆದ ತರಕಾರಿಗಳನ್ನು ಬೆಳೆಯುತ್ತಾರೆ. ಹಿಮಾಚಲದಲ್ಲಿ AAP ಅವರ ಉಚಿತಗಳು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಎಎಪಿ ಪಕ್ಷ ಘೋಷಿಸಿದ್ದ ಭರವಸೆಯನ್ನು ಅಲ್ಲಗಳೆದರು.

Exit mobile version