ಕೊನೆ ಘಳಿಗೆಯಲ್ಲಿ 2 ವಿಮಾನಗಳನ್ನು ರದ್ದುಗೊಳಿಸಿದ ಸ್ಪೈಸ್‌ ಜೆಟ್​ ಸಂಸ್ಥೆ: ಪರದಾಡಿದ ನೂರಾರು ಪ್ರಯಾಣಿಕರು

Bengaluru : ಕೊನೆಯ ಕ್ಷಣದಲ್ಲಿ ಸ್ಪೈಸ್‌ ಜೆಟ್ (Spicejet) ತನ್ನ ಎರಡೂ ವಿಮಾನಗಳನ್ನು ಕೆಲ ಕಾರ್ಯಚರಣೆಗಳಿಂದ ಭಾನುವಾರ ರದ್ದುಪಡಿಸಿದರ ಪರಿಣಾಮವಾಗಿ ಬೆಂಗಳೂರು ಮತ್ತು ಪಾಟ್ನಾಗೆ (Patna) ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಂಜೆ ಸಿಲುಕಿಕೊಂಡಿರುವಂತಹ ಘಟನೆ ನಡೆದಿದೆ.

ಸ್ಪೈಸ್‌ ಜೆಟ್ ಎಸ್​ಜಿ 531/532 ವಿಮಾನಗಳನ್ನು ಕೆಲ ಕಾರ್ಯಚರಣೆ ಕಾರಣಗಳಿಂದಾಗಿ ರದ್ದುಗೊಳಿಸಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಸೋಮವಾರ ಬೆಳಿಗ್ಗೆ ಹೆಚ್ಚುವರಿ ವಾಣಿಜ್ಯ ವಿಮಾನವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಟ್ನಾಗೆ ಎಸ್‌ಜಿ (SJ) 531 ಸಂಜೆ 5.20 ಕ್ಕೆ ಹೊರಡಬೇಕಿತ್ತು. ಆದರೆ ಕೆಲ ಕಾರಣಗಳಿಂದ ಕೊನೆ ಕ್ಷಣದಲ್ಲಿ ಅಂದರೆ ರಾತ್ರಿ 8 ಗಂಟೆಗೆ ರದ್ದುಗೊಳಿಸಿರುವುದಾಗಿ ಪ್ರಯಾಣಿಕರಿಗೆ ತಿಳಿಸಲಾಗಿದೆ.

ನೂರಾರು ಪ್ರಯಾಣಿಕರು ಸ್ಪೈಸ್‌ ಜೆಟ್ ವಿಮಾನ ರದ್ಧಾಗಿದ್ದರಿಂದ ಪರದಾಡುವಂತಾಗಿರುವುದಲ್ಲದೆ ಬೆಂಗಳೂರಿಗೆ ಭೇಟಿ ನೀಡಿದ್ದ ಜರ್ಮನಿಯ ಐಟಿ ಉದ್ಯೋಗಿ ಶಿವಂ ವರ್ಮಾ (Shivam Verma) ಕೂಡ ಒಬ್ಬರಾಗಿದ್ದು, ನಾನು ಪಾಟ್ನಾದಲ್ಲಿರುವ ನನ್ನ ಹೆತ್ತವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ನಿಜವಾದ ಸಮಸ್ಯೆಯೆಂದರೆ ವಿಮಾನಯಾನ ಸಂಸ್ಥೆಯ ಅಸಹಾಯಕ ಸಿಬ್ಬಂದಿಗಳು, ಅವರು ಯಾವುದೇ ನಿಖರವಾದ ಮಾಹಿತಿಯನ್ನು ನೀಡುತ್ತಿಲ್ಲ.

ನಮಗೆ ಆರಂಭದಲ್ಲಿ ವಿಮಾನದ ಸಮಯ ಸ್ವಲ್ಪ ವಿಳಂಬವಾಗಲಿದೆ ಎಂದು ತಿಳಿಸಿದ್ದರು. ರಾತ್ರಿ 10 ಗಂಟೆಗೆ ವಿಮಾನ ಹಾರಾಟ ನಡೆಸಬಹುದೆಂದು ಮಾಹಿತಿ ನೀಡಲಾಗಿತ್ತು. ಅಂತಿಮವಾಗಿ, ರಾತ್ರಿ 8 ಗಂಟೆಗೆ, ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ.

ತಮ್ಮ ಟಿಕೆಟ್‌ಗಳನ್ನು (Ticket) ಪ್ರಯಾಣಿಕರು ರದ್ದುಪಡಿಸಲು ಅಥವಾ ಪೂರ್ಣ ಮರುಪಾವತಿಗೆ ಸ್ಪೈಸ್‌ ಜೆಟ್ ಸಂಸ್ಥೆ ಹೇಳಿದೆ. ಆದರೆ ಯಾರೂ ಇದಕ್ಕೆ ಆಸಕ್ತಿ ತೋರಿಸಿಲ್ಲ. ಪ್ರಯಾಣಿಕರಿಗೆ ಲಘು ಉಪಹಾರ ನೀಡಲಾಯಿತು. ಬಳಿಕ ವಿಮಾನ ನಿಲ್ದಾಣದಿಂದ 40 ನಿಮಿಷಗಳ ದೂರದಲ್ಲಿರುವ ಹೋಟೆಲ್‌ಗಳಿಗೆ ಕಳುಹಿಸಿಕೊಡಲಾಗಿತ್ತು. ಸೋಮವಾರ ಬೆಳಗ್ಗೆ 8.30ಕ್ಕೆ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version