ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬ : ಬಿಜೆಪಿ ಆರೋಪ

BJP

ಕೆ.ಜೆ.ಜಾರ್ಜ್(KJ George) ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು. ಬೆಂಗಳೂರು(Bengaluru) ಉಸ್ತುವಾರಿ ಸಚಿವರಾಗಿದ್ದಾಗ ನಾಗರಿಕರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಬಿಬಿಎಂಪಿಗೆ(BBMP) ಆದೇಶಿಸಿದ್ದರು. ಆದರೆ ತಮ್ಮ ಸ್ವಂತ ಕಂಪನಿ ಎಂಬೆಸಿ ತೆರಿಗೆ ಬಾಕಿ ಇಟ್ಟುಕೊಂಡಿದ್ದರು. ಒಬ್ಬ ಟಿಂಬರ್ ವ್ಯಾಪಾರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯಾದರು. ಹೆಸರಿಗೆ ಮಾತ್ರ ಬೆಂಗಳೂರು ಅಭಿವೃದ್ಧಿ ಮಂತ್ರಿ, ಅಭಿವೃದ್ಧಿಯಾಗಿದ್ದು ಮಾತ್ರ ಜಾರ್ಜ್‌ ಎಂದು ಬಿಜೆಪಿ(BJP) ಲೇವಡಿ ಮಾಡಿದೆ.

ಕೆ.ಜೆ.ಜಾರ್ಜ್‌ ಅವರನ್ನು ಟೀಕಿಸಿ ಸರಣಿ ಟ್ವೀಟ್‌(Tweet) ಮಡಿರುವ ಬಿಜೆಪಿ, ಹಣ ಭಕ್ಷಕ ಕೆ.ಜೆ.ಜಾರ್ಜ್ ಈಗ ಕಾಂಗ್ರೆಸ್ ಪಕ್ಷದ ಹಣಕಾಸು ಸಂಚಾಲಕ. ಬೇನಾಮಿ ಹಣದ ಲೆಕ್ಕಿಡುವುದರಲ್ಲಿ ಜಾರ್ಜ್ಗೆ ಸರಿಸಾಟಿ ಬೇರೆ ಯಾರೂ ಇಲ್ಲ ಬಿಡಿ. ಚಂದ್ರಯಾನಕ್ಕೆ ತಗಲುವ ಹಣಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಮೈಸೂರು ರಸ್ತೆ(Mysuru Road) ಕಾಂಕ್ರಿಟ್ ಮಾರ್ಗಕ್ಕೆ ಮೀಸಲಿಟ್ಟಿದ್ದೇ ಕೆ.ಜೆ. ಜಾರ್ಜ್. ಇದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬದಲಾಗಿ ನೀಡಿದ ಯೋಜನೆ. ಕಪ್ಪು ಹಣದ ಹೊಂದಾಣಿಕೆಗಾಗಿ ಜಾರ್ಜ್ ಬೆಂಗಳೂರು ನಾಗರಿಕರಿಗೆ ಮಾಡಿದ ಮೋಸವಿದು. ಕೆ.ಜೆ. ಜಾರ್ಜ್ ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿದ್ದಾಗ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಎಂಬ “ಗುಳುಂ” ಯೋಜನೆ ರೂಪಿಸಲಾಗಿತ್ತು.

ನಾಗರಿಕರ ವಿರೋಧದಿಂದ ಅದು ಸ್ಥಗಿತಗೊಂಡಿತ್ತು. ಆದರೆ ಟೆಂಡರ್ಗೂ ಮೊದಲೇ ನಿರ್ಮಾಣ ಸಂಸ್ಥೆಯಿಂದ ತೆಗೆದುಕೊಂಡ ಕಿಕ್ ಬ್ಯಾಕ್ ಕಥೆ ಏನು? ಎಂದು ವ್ಯಂಗ್ಯವಾಡಿದೆ. ಒಬ್ಬ ಸಾಮಾನ್ಯ ಟಿಂಬರ್ ವ್ಯಾಪಾರಿಯಾಗಿದ್ದ ಕೆ.ಜೆ. ಜಾರ್ಜ್ ಇಂದು ಕರ್ನಾಟಕದ ಸಿರಿವಂತರ ಪಟ್ಟಿಯಲ್ಲಿದ್ದಾರೆ. ಇವರ ಸಿರಿವಂತಿಕೆಯ ಮೂಲ ಯಾವುದು? ಕಪ್ಪು ಹಣವನ್ನು ಅಧಿಕೃತಗೊಳಿಸಲು ಜಾರ್ಜ್ಗೆ ಹಣಕಾಸು ಸಮಿತಿ ಸಂಚಾಲಕತ್ವ ನೀಡಲಾಗಿದೆಯೇ? ಕೆಪಿಸಿಸಿಯ ಹಣಕಾಸು ಸಮಿತಿಗೆ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivkumar) ಅವರ ಬೇನಾಮಿ ಆಸ್ತಿಯ ಸೂತ್ರದಾರರು ಇವರೇ ಅಲ್ಲವೇ? ಪಕ್ಷದಲ್ಲಿ ಅಕ್ರಮ ಆಸ್ತಿಯ ಸಮಾನ ಹಂಚಿಕೆ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದೆ.

Exit mobile version