ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಟಾಪ್ 3 ವ್ಯಕ್ತಿಗಳು ಇವರೇ ನೋಡಿ!

cancer

ಸೋನಾಲಿ ಬೇಂದ್ರೆ:

ಜುಲೈ 2018 ರಲ್ಲಿ ಸೋನಾಲಿ ಬೇಂದ್ರೆ ಅವರು ಟ್ವಿಟರ್‌ನಲ್ಲಿ ತನಗೆ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ನ್ಯೂಯಾರ್ಕ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ಮೆಟಾಸ್ಟಾಸಿಕ್ ಕ್ಯಾನ್ಸರ್ನಲ್ಲಿ, ಕ್ಯಾನ್ಸರ್ ಕೋಶಗಳು ದುಗ್ಧರಸ ವ್ಯವಸ್ಥೆ ಅಥವಾ ರಕ್ತಪ್ರವಾಹದ ಮೂಲಕ ದೇಹದ ಹೊಸ ಪ್ರದೇಶಗಳಿಗೆ ಹರಡುತ್ತವೆ. ಕ್ಯಾನ್ಸರ್ ದೇಹದ ಮೂಲ ಭಾಗಗಳಿಂದ ಇತರ ಸ್ಥಳಗಳಿಗೆ ಹರಡಿದಾಗ ಅದನ್ನು ಮೆಟಾಸ್ಟಾಟಿಕ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

ನ್ಯೂಯಾರ್ಕ್‌ನಲ್ಲಿ ಸೋನಾಲಿಗೆ ಇದು ನಾಲ್ಕನೇ ಹಂತವಾಗಿದೆ ಮತ್ತು ಆಕೆ ಬದುಕುಳಿಯುವ ಯಾವ ಸಾಧ್ಯತೆ ಇಲ್ಲ. ಇದ್ದರೆ ಅದು ಶೇ.30% ಮಾತ್ರ ಎಂದು ಹೇಳಲಾಯಿತು. ಪಾಸಿಟಿವ್ ಆಗಿ ಇದ್ದ ಪರಿಣಾಮ ತಮ್ಮ ಕ್ಯಾನ್ಸರ್ ಚಿಕಿತ್ಸೆಯನ್ನು ನಿಭಾಯಿಸಲು ಸಹಾಯ ಮಾಡಿತು ಎಂದು ಸೋನಾಲಿ ಬೇಂದ್ರೆ ಅವರು ತಿಳಿಸಿದರು. ಕ್ಯಾನ್ಸರ್ ಎಂಬ ಮಾರಕ ಖಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಹೊಸ ಜಗ್ಗತ್ತು ನೋಡಿದವರಲ್ಲಿ ಇವರು ಒಬ್ಬರು.

ಯುವರಾಜ್ ಸಿಂಗ್ :

2011ರ ವಿಶ್ವಕಪ್ ವಿಜಯದ ನಂತರ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಎಡ ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು
ಪತ್ತೆಯಾಯಿತು. ಇದು ಸೆಮಿನೋಮಾ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು. ಯುವರಾಜ್ ಸಿಂಗ್ ಅವರು US ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಮಾರ್ಚ್ 2012 ರಲ್ಲಿ, ಕಿಮೋಥೆರಪಿಯ ಮೂರನೇ ಮತ್ತು ಅಂತಿಮ ಚಿಕಿತ್ಸೆಯನ್ನು ಪೂರ್ಣಗೊಳಿಸಿ ಸಂಪೂರ್ಣ ಗುಣಮುಕ್ತರಾಗಿ ಆಸ್ಪತ್ರೆಯಿಂದ ಹೊರಬಂದರು. ಯುವರಾಜ್ ಅವರೇ ಹೇಳುವಂತೆ, ಪಂದ್ಯಗಳ ಸಮಯದಲ್ಲಿ ಅವರು ತಮ್ಮ ಗಮನವನ್ನು ಆಟದ ಮೇಲೆ ಕೇಂದ್ರೀಕರಿಸಲು ಯೋಚಿಸುತ್ತಿದ್ದರಂತೆ. ಖಾಯಿಲೆಯ ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದ್ದರಂತೆ. ಯುವಿ ಅವರು 2011ರ ಆರಂಭದಲ್ಲಿ ತೀವ್ರವಾದ ಉಸಿರಾಟದ ತೊಂದರೆಯನ್ನು ಅನುಭವಿಸಿದರು. ರಕ್ತವನ್ನು ಉಗುಳುವ ಮೂಲಕ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಕೊಂಡಿದ್ದರು. ಇದು ಅವರ ಆಟದ ಜೀವನಕ್ಕೆ ಕೊಂಚ ಅಡ್ಡಿ ಪಡಿಸಿತು.

ಯುವರಾಜ್ ಸಿಂಗ್ ಅವರು ಹಲವು ಮಾಧ್ಯಮ ಸಂದರ್ಶನಗಳಲ್ಲಿ, ರೋಗಲಕ್ಷಣದ ಹಂತದಲ್ಲಿ ಕ್ಯಾನ್ಸರ್ ಅನ್ನು ಸ್ವೀಕರಿಸುವುದು, ರೋಗನಿರ್ಣಯವನ್ನು ಒಪ್ಪಿಕೊಳ್ಳುವುದು, ಕ್ಯಾನ್ಸರ್ ವಿರುದ್ಧ ಹೋರಾಡಲು ಸರಿಯಾದ ಮಾರ್ಗವನ್ನು ಅನುಸರಿಸುವುದು ಮತ್ತು ಚಿಕಿತ್ಸೆಯ ಉದ್ದಕ್ಕೂ ಆಶಾವಾದಿಯಾಗಿರುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ. ಒಮ್ಮೆ ನಾನು ಕ್ಯಾನ್ಸರ್ ಅನ್ನು ಒಪ್ಪಿಕೊಂಡರೆ ಮಾತ್ರ ನಾನು ಅದನ್ನು ಸೋಲಿಸಲು ಸಾಧ್ಯವಾಗುವುದು. ಜೀವನವು ಕುಸಿದಾಗ ನಿಮಗೆ ಎದ್ದೇಳಲು ಆಯ್ಕೆಯಿರುತ್ತದೆ ಎಂಬ ಆಶಾವಾದಿ ಮಾತುಗಳನ್ನು ಹೇಳಿ ಕ್ಯಾನ್ಸರ್ ಪೀಡಿತರಿಗೆ ಹಾಗು ಕ್ಯಾನ್ಸರ್ ಪೀಡಿತ ಕುಟುಂಬಸ್ತರಿಗೆ ಧೈರ್ಯತುಂಬಿದರು.

ಸದ್ಗುರು ಜಗ್ಗಿ ವಾಸುದೇವ:


ಸದ್ಗುರು ಜಗ್ಗಿ ವಾಸುದೇವ ಅವರು ಕೂಡ ಕ್ಯಾನ್ಸರ್ ಎಂಬ ಮಾರಕ ಖಾಯಿಲೆಗೆ ಗುರಿಯಾಗಿ ಸಂಪೂರ್ಣವಾಗಿ ಗುಣಮುಖರಾದವರೆ. ಸದ್ಗುರು ಜಗ್ಗಿ ವಾಸುದೇವ ಅವರು ಹೇಳುವ ಪ್ರಕಾರ ಆರೋಗ್ಯವು ಆಧ್ಯಾತ್ಮಿಕತೆಯ ಅಡ್ಡ ಪರಿಣಾಮವಾಗಿದೆ. ನಿಮ್ಮೊಳಗೆ ನೀವು ಸಂಪೂರ್ಣರಾಗಿದ್ದರೆ, ಆರೋಗ್ಯವಾಗಿರುವುದು ಸಹಜ.
ಯೋಗದ ದೃಷ್ಟಿಕೋನದಿಂದ, ವ್ಯವಸ್ಥೆಯು ಒಳಗಿನಿಂದ ಉತ್ಪಾದಿಸುವ ಕ್ಯಾನ್ಸರ್ ಮತ್ತು ಇತರ ಅಡಚಣೆಗಳು ಅಥವಾ ರೋಗಗಳು ಶಕ್ತಿಯ ದೇಹದಲ್ಲಿನ ಅಸಮತೋಲನದಿಂದ ಉಂಟಾಗುತ್ತವೆ ಎಂದು ಹೇಳಿದರು. ಪ್ರತಿಯೊಬ್ಬರ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಇರುತ್ತವೆ. ಆದರೆ ಕೆಲವು ಕ್ಯಾನ್ಸರ್ ಕೋಶಗಳು ಅಸ್ತವ್ಯಸ್ತಗೊಂಡಿರುವುದು ನಿಮ್ಮ ಜೀವನ ಅಥವಾ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

Exit mobile version