ಮಂಡ್ಯದಲ್ಲಿ ಮಹಿಳೆಯ ಭೀಕರ ಹತ್ಯೆ; ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಶಂಕೆ

Mandya: ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯೊರ್ವಳನ್ನ ಅತ್ಯಾಚಾರ ಮಾಡಿ ಕೊಲೆಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಿನ್ನೆ ತಡರಾತ್ರಿ ಗಂಗಾ ಎನ್ನುವ ಮಹಿಳೆಯ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ (Ganjam) ನಡೆದಿದೆ.


ಇಲ್ಲಿನ ಟೀ ಅಂಗಡಿಯೊಂದರ ಹಿಂಭಾಗದಲ್ಲಿ ಸತ್ತು ಬಿದ್ದಿರುವ ಮಹಿಳೆಯ ಹೆಸರು ಗಂಗಾ(Ganga). ಮೂಲತಃ ಈಕೆ ತಮಿಳುನಾಡು (Tamil Nadu) ಮೂಲದವರು. ಇವರು ಅಲೆಮಾರಿ ಜನರಾಗಿದ್ದ ಕಾರಣ ಒಂದೊಂದು ಪ್ರದೇಶಕ್ಕೆ ಮೂರ್ನಾಲ್ಕು ತಿಂಗಳಿಗೊಮ್ಮೆಗುಳೆ ಹೋಗುತ್ತಿದ್ದರು, ಕಳೆದ ಮೂರು ತಿಂಗಳ ಹಿಂದೆಯಷ್ಟೇ ಇವರು ಶ್ರೀರಂಗಪಟ್ಟಣದ ಗಂಜಾಂಗೆ ಬಂದು ನೆಲೆಸಿದ್ರು. ಮೂರು ತಿಂಗಳ ಹಿಂದೆಯಷ್ಟೇ ಗಂಗಾ ಹಾಗೂ ಆಕೆಯ ಕುಟುಂಬಸ್ಥರು ಶ್ರಿರಂಗಪಟ್ಟಣದ ಗಂಜಾಂಗೆ ಬಂದು ನೆಲೆಸಿದ್ರು. ಇವರು ಇಲ್ಲಿಯ ಕಾವೇರಿ ನದಿಯಲ್ಲಿ ನಾಣ್ಯ ಹುಡುಕುವ ಕೆಲಸವನ್ನ ಮಾಡುತ್ತಿದ್ದರು.

ಆದರೆ ಈ ಗಂಗಾ ಎನ್ನುವ ಮಹಿಳೆ ಯಾವಾಗಲೂ ಕೂಡ ಕಂಠ ಪೂರ್ತಿ ಕುಡಿದು ತಿರುಗಾಡುತ್ತಿದ್ದಳು. ನಿನ್ನೆ ತಡರಾತ್ರಿ ಯಾರೊ ದುಷ್ಕರ್ಮಿಗಳು ಗಂಗಾಳಿಗೆ ಮದ್ಯಪಾನ ಮಾಡಿಸಿ, ಬಳಿಕ ಅತ್ಯಾಚಾರವೆಸಗಿ ಗಂಗಾಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಎಸ್ಕೇಪಾಗಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.ಸದ್ಯ ಮೈಸೂರಿನ ಜೆಎಸ್ಎಸ್ (JSS) ಆಸ್ಪತ್ರೆಗೆ ಈ ಮೃತದೇಹವನ್ನರವಾನಿಸಲಾಗಿದ್ದು. ಸದ್ಯ ಈ ಪ್ರಕಾರಣವು ಶ್ರೀರಂಗಪಟ್ಟಣದಲ್ಲಿರುವ (Srirangapatna) ಟೌನ್ ಪೊಲೀಸ್ (Town Police) ಠಾಣೆಯೊಂದರಲ್ಲಿ ದಾಖಲಾಗಿದೆ.

ಅತ್ಯಾಚಾರ ಆರೋಪ ಕೇಳಿ ಬಂದಿರುವುದರಿಂದ ಶ್ರಿರಂಗಪಟ್ಟಣವೇ (Srirangapatna) ಬೆಚ್ಚಿ ಬಿದ್ದಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಸತ್ಯತೆ ಆಚೆ ಬರಬೇಕಿದೆ. ಸದ್ಯ ಖಾಕಿ ಪಡೆ ಆರೋಪಿಗಾಗಿ ತಲಾಶ್ ನಡೆಸುತ್ತಿದ್ದಾರೆ.ಅದೇನೆ ಇರಲಿ ಕೊಲೆ ಪಾತಕಿಯ ಕೈಗೆ ಕೋಳ ಬೀಳ್ಳಬೇಕಿದೆ,ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಬೇಕಿದೆ.

ರಶ್ಮಿತಾ ಅನೀಶ್

Exit mobile version