ನಟ ಚೇತನ್ ಗಡಿಪಾರಾಗಬೇಕು ; ಶಿಫಾರಸ್ಸು ಮಾಡಿದ ಪೊಲೀಸ್ ಇಲಾಖೆ!

actor

ನಟ ಚೇತನ್(Actor Chethan) ಅವರು ವಿವಾದಾತ್ಮಕ(Controversial) ಹೇಳಿಕೆ ನೀಡುವ ಮುಖೇನ ಧರ್ಮಗಳ ನಡುವೆ ಗಲಭೆ ಹುಟ್ಟಿಸುವಂತ ಕೆಲಸ ಮಾಡುತ್ತಿದ್ದಾರೆ. ಚೇತನ್ ನನ್ನು ಅಮೇರಿಕಾ(America) ದೇಶಕ್ಕೆ ಗಡಿಪಾರು ಮಾಡಿ ಎಂದು ರಾಜ್ಯ ಗೃಹ ಸಚಿವಾಲಯಕ್ಕೆ ಪೊಲೀಸ್(Police) ಇಲಾಖೆ ಪತ್ರ ರವಾನಿಸುವ ಮೂಲಕ ಶಿಫಾರಸ್ಸು ಮಾಡಿದೆ. ಕನ್ನಡ ಚಿತ್ರರಂಗದ ನಟ ಚೇತನ್ ವಿರುದ್ಧ ಸಾಕಷ್ಟು ಆರೋಪಗಳು ವ್ಯಕ್ತವಾಗುತ್ತಲೇ ಇವೆ. ಸದ್ಯ ಇದೇ ಕಾರಣವನ್ನು ಉಲ್ಲೇಖಿಸಿ, ಪೊಲೀಸ್ ಇಲಾಖೆಯು ನಟ ಚೇತನ್ ಒಬ್ಬರು ವಿವಾದಾತ್ಮಕ ಹೇಳಿಕೆ ನೀಡಿವವರು, ಇಂಥವರು ಸಮಾಜಕ್ಕೆ ಹಾನಿಕಾರಕ!

ತಮ್ಮ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಧರ್ಮಗಳ ನಡುವೆ ಗಲಭೆ ಉಂಟು ಮಾಡುತ್ತಾರೆ. ಈ ಕಾರಣ ಅವರನ್ನು ಅಮೇರಿಕಾ ದೇಶಕ್ಕೆ ಗಡಿಪಾರು ಮಾಡುವ ಕುರಿತು ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟ ಚೇತನ್ ಅವರನ್ನು ಗಡಿಪಾರು ಮಾಡಬೇಕು ಎಂದು ಈ ಹಿಂದೆ ಬಸವನಗುಡಿ ಪೊಲೀಸರು ಆರೋಪ ವ್ಯಕ್ತಪಡಿಸಿದ್ದರು. ಕಳೆದ ಎರಡು ವಾರಗಳ ಹಿಂದೆಯಷ್ಟೇ ನಟ ಚೇತನ್ ಅವರು ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪದಡಿ ಬಸವನಗುಡಿ ಪೊಲೀಸರು ಅವರ ಮನೆಗೆ ನುಗ್ಗಿ ಠಾಣೆಗೆ ಕರೆದುಕೊಂಡು ಬಂದಿದ್ದರು.

ಹೋರಾಟದ ನೆಪದಲ್ಲಿ ನಟ ಚೇತನ್ ಅವಹೇಳನಕಾರಿ ಭಾಷಣ ಮಾಡುವ ಮೂಲಕ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಕಾಪಾಡುವಂತ ಕೆಲಸ ಮಾಡದೇ, ಶಾಂತಿ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಈ ಪ್ರಮುಖ ಕಾರಣದಿಂದ ಅವರನ್ನು ಅಮೇರಿಕಾಗೆ ಗಡಿಪಾರು ಮಾಡುವಂತೆ ಎಡಿಜಿಪಿ ಪ್ರತಾಪ್ ರೆಡ್ಡಿ ಅವರ ಮೂಲಕ ಬಸವನಗುಡಿ ಪೊಲೀಸರು ಗೃಹ ಕಚೇರಿಯ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ರವಾನಿಸಿದ್ದಾರೆ ಎನ್ನಲಾಗಿದೆ.

Exit mobile version