Bengaluru: ಕರ್ನಾಟಕ (Chethan Ahimsa Viral Statement) ಸರ್ಕಾರಿ ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿಈ ಹಿಂದೆ ಇದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ
ಬನ್ನಿ ಎಂಬ ಘೋಷವಾಕ್ಯದ ಜಾಗದಲ್ಲಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಘೋಷವಾಕ್ಯ ಸ್ಥಾನ ಪಡೆದುಕೊಂಡಿದೆ. ಅದರ ಬೆನ್ನಲ್ಲೇ ನಟ ಚೇತನ್ ಅಹಿಂಸಾ
ಹೇಳಿಕೆಯೊಂದು (Chethan Ahimsa Viral Statement) ವೈರಲ್ ಆಗ್ತಿದೆ.
ಬೀದರ್ನಲ್ಲಿ (Bidar) ನಡೆದ ಕಾರ್ಯಕ್ರಮವೊಂದರಲ್ಲಿ ನಟ ಚೇತನ್ ಅಹಿಂಸಾ “ಶಾಲೆಗಳಲ್ಲಿ ದೇವರ ಪೂಜೆ ಮಾಡಬೇಕಿಲ್ಲ. ಪೂಜೆ, ಪುನಸ್ಕಾರವೆಂಬ ಮೌಢ್ಯ ನಿಮ್ಮ
ನಿಮ್ಮ ಮನೆ ದೇಗುಲಗಳಲ್ಲಿ ಇಟ್ಟುಕೊಳ್ಳಿ. ಶಾಲೆಗಳಲ್ಲಿ ಮುಖ್ಯವಾಗಿ ವೈಜ್ಞಾನಿಕತೆ ಪಾಲಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.
ವೈಜ್ಞಾನಿಕತೆಯಿಂದಲೇ ಸತ್ಯ, ವೈಜ್ಞಾನಿಕ ನಡುವೆ ಸತ್ಯ” ಎಂದು ಚೇತನ್ ಅಭಿಪ್ರಾಯ ತಿಳಿಸಿದ್ದಾರೆ.
ಕಳೆದ ರಾತ್ರಿ ಬೀದರ್ನ ಹುಮನಾಬಾದ್ನಲ್ಲಿ ಕಲ್ಯಾಣ ಕರ್ನಾಟಕದ ಸಮಾನತಾವಾದಿಗಳೊಂದಿಗೆ ನ್ಯಾಯ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. 15 ನೇ ಶತಮಾನದಲ್ಲಿ, ಬೀದರ್
ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯಗಳ ನಡುವಿನ ಶಕ್ತಿ ಕೇಂದ್ರವಾಗಿತ್ತು – ಆ ಸಮಯದಲ್ಲಿ ಬೀದರ್ ಅನ್ನು ಯಾರು ನಿಯಂತ್ರಿಸುತ್ತಿದ್ದರೋ ಅವರು ಅಧಿಕಾರಕ್ಕೆ
ಬರುತಿದ್ದರು. ಇಂದು ನಾವು ಆ ಇತಿಹಾಸವನ್ನು ಅಧ್ಯಯನ ಮಾಡಬೇಕು ಮತ್ತು ಬೀದರ್ನಲ್ಲಿ ಸಮಾನತೆಯನ್ನು ಬಲಪಡಿಸಬೇಕು ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.
‘We do not need prayers in school; keep superstition & faith in your homes’ ಎಂದು ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದಾರೆ. ಈ ಮೂಲಕ “ಶಾಲೆಗಳಲ್ಲಿ
ನಮಗೆ ಪ್ರಾರ್ಥನೆಯ ಅಗತ್ಯವಿಲ್ಲ; ನಿಮ್ಮ ಮೂಢನಂಬಿಕೆ ಮತ್ತು ನಂಬಿಕೆ ನಿಮ್ಮ ಮನೆಗಳಲ್ಲಿ ಇಟ್ಟುಕೊಳ್ಳಿ” ಎಂದು ಚೇತನ್ ಅಹಿಂಸಾ ಸಮಾಜಿಕ ಜಾಲತಾಣಗಳಲ್ಲಿ ಟ್ವೀಟ್
(Tweet) ಮಾಡಿದ್ದಾರೆ.
ಇದನ್ನು ಓದಿ: ಬಿಬಿಎಂಪಿ ಬಜೆಟ್ 2024-25: ಮಾರ್ಚ್ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್