• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಶೃಂಗಸಭೆಗೆ ಕ್ಷಣಗಣನೆ : ‘ಭಾರತ ಮಂಟಪ’ದಲ್ಲಿ G20 ನಾಯಕರ ಶೃಂಗಸಭೆಯ ಸಿದ್ಧತೆ ವಿವರ

Teju Srinivas by Teju Srinivas
in ಡಿಜಿಟಲ್ ಜ್ಞಾನ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಶೃಂಗಸಭೆಗೆ ಕ್ಷಣಗಣನೆ : ‘ಭಾರತ ಮಂಟಪ’ದಲ್ಲಿ G20 ನಾಯಕರ ಶೃಂಗಸಭೆಯ ಸಿದ್ಧತೆ ವಿವರ
0
SHARES
91
VIEWS
Share on FacebookShare on Twitter

New Delhi : ರಾಷ್ಟ್ರರಾಜಧಾನಿಯಾದ ನವ ದೆಹಲಿಯಲ್ಲಿ (Countdown to Bharat Pavilion) ಹೊಸದಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ G20 ನಾಯಕರ

ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ಜಾಗತಿಕ ನಾಯಕರ ಉಪಸ್ಥಿತಿಯೊಂದಿಗೆ ಇಂದು 18 ನೇ G20 ಶೃಂಗಸಭೆಯನ್ನು ಆಯೋಜಿಸಲು ರಾಷ್ಟ್ರೀಯ ರಾಜಧಾನಿ ಸಿದ್ಧವಾಗಿದೆ.

Countdown to Bharat Pavilion

ಈ ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ

ಮುಖ್ಯಸ್ಥರು ಭಾಗವಹಿಸುತ್ತಿದ್ದು, ವಿಶ್ವ ನಾಯಕರ ಆಗಮನದೊಂದಿಗೆ ಶೃಂಗಸಭೆಯು ಬೆಳಿಗ್ಗೆ 9.30 ರಿಂದ (ಭಾರತ್ ಮಂಟಪ) ಪ್ರಾರಂಭವಾಗಿದೆ.

ಸುಮಾರು 10.30 ಕ್ಕೆ G20 ಶೃಂಗಸಭೆಯ ಮೊದಲ ಅಧಿವೇಶನ:
ಜಿ20 ನಾಯಕರ ಶೃಂಗಸಭೆಯ ಅಧಿವೇಶನದಲ್ಲಿ ‘ಒಂದು ಭೂಮಿ’’ ಒನ್ ಅರ್ಥ್’ ಎಂಬುದು ಪ್ರಮುಖ ಚರ್ಚೆಯ ವಿಷಯವಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ G20 ಶೃಂಗಸಭೆಯ

ವಿಷಯವು “ವಸುಧೈವ ಕುಟುಂಬಕಂ”(Vasudhaiva Kutumbakam) ಅಥವಾ “ಒಂದು ಭೂಮಿ – ಒಂದು ಕುಟುಂಬ – ಒಂದು ಭವಿಷ್ಯ” – ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ

ಚಿತ್ರಿಸಲಾಗಿದ್ದು, ಎಲ್ಲಾ ಜೀವನದ ಮೌಲ್ಯವನ್ನು (Countdown to Bharat Pavilion) ದೃಢೀಕರಿಸುತ್ತದೆ.


‘ಒನ್ ಅರ್ಥ್’ (One Earth) ಅಧಿವೇಶನದ ಮುಕ್ತಾಯದ ನಂತರ ಊಟದ ವ್ಯವಸ್ಥೆ ಇದ್ದು, ನಂತರ ಶೃಂಗಸಭೆಯ ಭಾಗವಾಗಿ ‘ಒಂದು ಕುಟುಂಬ’ದ ಮತ್ತೊಂದು ಅಧಿವೇಶನವನ್ನು ಮಧ್ಯಾಹ್ನ 3.00 ಗಂಟೆಗೆ

ನಡೆಸಲಾಗುವುದಲ್ಲದೆ ಸಂಜೆ ಸುಮಾರು 7:00 ಗಂಟೆಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಆಯೋಜಿಸಿರುವ ಔತಣ ಕೂಟವು ನಡೆಯಲಿದೆ. ಪ್ರಸ್ತುತ ಸಚಿವ

ಸಂಪುಟದಲ್ಲಿರುವ ವಿದೇಶಿ ಪ್ರತಿನಿಧಿಗಳು ಸಂಸದರು ಮತ್ತು ಸಚಿವರುಗಳಲ್ಲದೆ ಜಿ 20 ಶೃಂಗಸಭೆಯ ಅತಿಥಿಗಳು ಹಾಗೂ ರಾಷ್ಟ್ರದ ಕೆಲವು ಮಾಜಿ ಹಿರಿಯ ನಾಯಕರು ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್,(Jeo Biden) ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak), ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜಪಾನ್

ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೇರಿದಂತೆ ಪ್ರಮುಖ ನಾಯಕರು ದೇಶದ ರಾಜಧಾನಿಯ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ

ವ್ಲಾಡಿಮಿರ್ ಪುಟಿನ್ ವಾರಾಂತ್ಯದ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂಬುದನ್ನು ಮೂಲಗಳು ತಿಳಿಸಿವೆ. ಆದರೆ ಚೀನಾವನ್ನು ಚೀನಾದ ಪ್ರಧಾನಿಯಾದ ಲಿ ಕಿಯಾಂಗ್ ಅವರು ಶೃಂಗಸಭೆಯಲ್ಲಿ

ಪ್ರತಿನಿಧಿಸುತ್ತಿದ್ದು, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ.

ಇನ್ನು ಜಿ20 ಶೃಂಗಸಭೆಯನ್ನು ಭಾರತವು ಆಯೋಜಿಸುತ್ತಿರುವುದು ಇದೇ ಮೊದಲಾಗಿದ್ದು, ಭಾರತದ ಸಂಪ್ರದಾಯ ಮತ್ತು ಶಕ್ತಿಯನ್ನು ಬಿಂಬಿಸಲು ವ್ಯಾಪಕ ತಯಾರಿಗಳು ನಡೆಯುತ್ತಿರುವುದಲ್ಲದೆ ಭಾರತವು

ಆಫ್ರಿಕನ್ ಯೂನಿಯನ್ ಅನ್ನು G20 ಸದಸ್ಯರನ್ನಾಗಿ ಸೇರಿಸುವ ಮತ್ತು ಶೃಂಗಸಭೆಯಲ್ಲಿ ಉಕ್ರೇನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆಯ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಅವಳಿ

ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ.

narendra

ಭಾರತವು ಅಂತರ್ಗತ ಬೆಳವಣಿಗೆ, ಡಿಜಿಟಲ್ (Digital) ನಾವೀನ್ಯತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸಮಾನವಾದ ಜಾಗತಿಕ ಆರೋಗ್ಯ ಪ್ರವೇಶದಂತಹ ವಿವಿಧ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದು,

ತನ್ನ ಅಧ್ಯಕ್ಷ ಸ್ಥಾನವನ್ನು ಬಳಸಿಕೊಳ್ಳುವ ಮೂಲಕ ಭಾರತವು ತನ್ನದೇ ಆದ ಜನಸಂಖ್ಯೆಗೆ ಪ್ರಯೋಜನಕಾರಿಯಾದ ಮತ್ತು ವಿಶಾಲವಾದ ಜಾಗತಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಸಹಕಾರಿ

ಪರಿಹಾರಗಳನ್ನು ಉತ್ತೇಜಿಸಲಾಗುತ್ತದೆ.

G20 ಶೃಂಗಸಭೆಯಲ್ಲಿ ನೈಜೀರಿಯಾ (Nigeria) , ಅರ್ಜೆಂಟೀನಾ, ಇಟಲಿ, AU (ಕಾಮ್ರೊಸ್ ಪ್ರತಿನಿಧಿಸುತ್ತದೆ) ಮತ್ತು ದಕ್ಷಿಣ ಆಫ್ರಿಕಾ ಸೇರಿದ್ದು, ಬಾಂಗ್ಲಾದೇಶ, ಯುನೈಟೆಡ್ ಕಿಂಗ್‌ಡಮ್, ಜಪಾನ್,

ಸೌದಿ ಅರೇಬಿಯಾ, ರಿಪಬ್ಲಿಕ್ ಆಫ್ ಕೊರಿಯಾ, ಈಜಿಪ್ಟ್, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್, (United States) ಕೆನಡಾ, ಚೀನಾ, ಯುಎಇ, ಬ್ರೆಜಿಲ್, ಇಂಡೋನೇಷ್ಯಾ, ಟರ್ಕಿ ಸ್ಪೇನ್, ಜರ್ಮನಿ, ಫ್ರಾನ್ಸ್,

ಮಾರಿಷಸ್, ಯುರೋಪಿಯನ್ ಯೂನಿಯನ್ ಮತ್ತು ಸಿಂಗಾಪುರ ಭಾಗವಹಿಸುತ್ತಿರುವ ದೇಶಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವ ನಾಯಕರ ಸಭೆಯು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯಲ್ಲಿ ಹೊಸ ಹಾದಿಯನ್ನು ರೂಪಿಸಲಿದೆ ಎಂದು ವಿಶ್ವಾಸ

ವ್ಯಕ್ತಪಡಿಸುವುದರೊಂದಿಗೆ ಶನಿವಾರ ಪ್ರಾರಂಭವಾಗುವ ಜಿ 20 ಶೃಂಗಸಭೆಗೆ ದೆಹಲಿಗೆ ಆಗಮಿಸಿದ ನಾಯಕರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು.

ರಾಷ್ಟ್ರ ರಾಜಧಾನಿಯನ್ನು ಈಗಾಗಲೇ ತಲುಪಿದ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ

ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ (Alberto Fernandez) ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಭಾಗಿಯಾಗಿದ್ದಾರೆ.

ಇದನ್ನು ಓದಿ: ಸಿಹಿ ಸುದ್ದಿ: ಶಕ್ತಿಯೋಜನೆ ಇನ್ನಷ್ಟು ಬಲತುಂಬಲು 1000 ಹೊಸ ಬಸ್ ಖರೀದಿಗೆ ಮುಂದಾದ ಸರ್ಕಾರ

  • ಭವ್ಯಶ್ರೀ ಆರ್.ಜೆ
Tags: BritianG20Newdelhi

Related News

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ
ದೇಶ-ವಿದೇಶ

ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ

September 30, 2023
ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.