ತುಮಕೂರಿನಲ್ಲಿ ಋುತುಸ್ರಾವ ಮತ್ತು ಬಾಣಂತಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಮೂಲಕ ದೌರ್ಜನ್ಯ

Tumakur: ಮುಟ್ಟಾದ ಹೆಣ್ಣು ಮಗುವನ್ನು 4 ರಿಂದ 5 ದಿನ ಹಾಗೂ ಬಾಣಂತಿಯನ್ನು 2 ರಿಂದ 3 ತಿಂಗಳು ಗ್ರಾಮದಿಂದ ಹೊರಕ್ಕೆ ಅಂದರೆ ಗುಡಿಸಲಲ್ಲಿಇರಿಸುವ ಪದ್ಧತಿ ಇನ್ನು ಇದೆ. ಚಳಿ, ಮಳೆ, ಗಾಳಿ ಲೆಕ್ಕಿಸದೆ ಮಹಿಳೆ ಜೀವ ಕೈಯಲ್ಲಿಡಿದು ಕಾಲ ಕಳೆಯಬೇಕಾಗುತ್ತದೆ. ಮುಟ್ಟಾದ ಹೆಣ್ಣನ್ನು ಗ್ರಾಮದಿಂದ ಹೊರಕ್ಕಿಡುವ ಅನಿಷ್ಟ ಆಚರಣೆ ಕಾಡುಗೊಲ್ಲ ಸಮುದಾಯಕ್ಕೆ ಮಾತ್ರವಲ್ಲದೆ ಆ ಸಮುದಾಯದಲ್ಲಿಇನ್ನು ಅನೇಕ ಆಚರಣೆಗಳಿವೆ.

ತುಮಕೂರಿನ@Tumakur ಚಿಕ್ಕನೆಟ್ಟಗುಂಟೆ ಗ್ರಾಮದಲ್ಲಿ ಋುತುಸ್ರಾವ, ಬಾಣಂತಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ. ಮುಟ್ಟಾದ ಹೆಣ್ಣುಮಕ್ಕಳನ್ನು 4-5 ದಿನ ಹಾಗೂ ಬಾಣಂತಿಯರು 2-3 ತಿಂಗಳು ಗ್ರಾಮದಿಂದ ಹೊರಕ್ಕೆ ಇರಬೇಕು ಎನ್ನುವ ಈ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ನಾಗರಿಕ ಸಮಾಜದಲ್ಲಿ ಮುಟ್ಟಿನ ಮೌಢ್ಯಕ್ಕೆ ಕೊನೆಯಿಲ್ಲದಾಗಿದೆ. ಋುತುಕಾಲ, ಬಾಣಂತಿ ಸಮಯದಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಮೂಲಕ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಸಂಪ್ರದಾಯದ ಬಣ್ಣ ಬಳಿದ ಮೌಢ್ಯದಿಂದ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಗುಬ್ಬಿ (Gubbi) ತಾಲೂಕಿನ ಚಿಕ್ಕನೆಟ್ಟಗುಂಟೆ ಗ್ರಾಮದಲ್ಲಿ ಮುಟ್ಟಾದವರನ್ನು ಗ್ರಾಮದಿಂದ ಹೊರಗಿಟ್ಟಿರುವ ಪ್ರಕರಣ ಸದ್ಯ ಮುನ್ನೆಲೆಯಲ್ಲಿದೆ. ಇತ್ತೀಚೆಗೆ ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ(Gollarahatti) ಸೂತಕ ಎಂದು ಬಾಣಂತಿಯನ್ನು ಊರಾಚೆ ಗುಡಿಸಲಲ್ಲಿಟ್ಟಿದ್ದರಿಂದ ಮಗು ಮೃತಪಟ್ಟಿದ್ದು ಇತ್ತೀಚೆಗೆ ವರದಿಯಾಗಿತ್ತು. ಇವೆರಡು ಸುದ್ದಿಯಾಗಿ ಸದ್ದು ಮಾಡಿದ ಪ್ರಕರಣಗಳಷ್ಟೇ. ಆದರೆ, ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ನಾಗರಿಕ ಸಮಾಜಕ್ಕೆ ಮುಟ್ಟಿನ ಮೈಲಿಗೆ ಇದೆ.

ಗೊಲ್ಲರಹಟ್ಟಿಗಳಲ್ಲಿ ಮೌಢ್ಯ:
ರಾಜ್ಯಾದ್ಯಂತ ಕಾಡುಗೊಲ್ಲ ಬುಡಕಟ್ಟು ಸಮುದಾಯದ 4ರಿಂದ 5 ಸಾವಿರ ಹಟ್ಟಿಗಳಿವೆ. ಸುಮಾರು 8 ಲಕ್ಷ ಜನಸಂಖ್ಯೆ ಇರುವ ಸಮಾಜದಲ್ಲಿ ಮೌಢ್ಯವನ್ನು ನಂಬಿ ಆಚರಿಸುತ್ತಿವೆ. ಶಿವಮೊಗ್ಗ (Shivamogga), ತುಮಕೂರು,ಬಳ್ಳಾರಿ ಗಡಿಭಾಗ, ದಾವಣಗೆರೆ, ಚಿತ್ರದುರ್ಗ,ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ (Hassan) ಜಿಲ್ಲೆಸೇರಿದಂತೆ 10-11 ಜಿಲ್ಲೆಗಳ 37 ತಾಲೂಕುಗಳಲ್ಲಿಈ ಸಮುದಾಯವಿದ್ದು, ಮೌಢ್ಯಾಚರಣೆ ನಿತ್ಯ ನಿರಂತರವಾಗಿದೆ.

ಗ್ರಾಮದಿಂದ ಹೊರಕ್ಕೆ:
ಮುಟ್ಟಾದ ಹೆಣ್ಣನ್ನು ಗ್ರಾಮದಿಂದ ಹೊರಕ್ಕಿಡುವ ಅನಿಷ್ಟ ಆಚರಣೆ ಕಾಡುಗೊಲ್ಲ(Kadugolla) ಸಮುದಾಯಕ್ಕೆ ಮಾತ್ರ ಸೀಮಿತವಲ್ಲದೆ ಆ ಸಮುದಾಯದಲ್ಲಿನ ಇನ್ನು ಅನೇಕ ಪ್ರಕರಣಗಳು ಕಣ್ಣೆದುರಿಗಿವೆ. ಬ್ರಾಹ್ಮಣ, ಒಕ್ಕಲಿಗ ಸಮುದಾಯ ಸೇರಿದಂತೆ ಮುಂದುವರಿದ ಸಮುದಾಯಗಳೆಂದು ಕರೆಸಿಕೊಳ್ಳುವ ಸಮುದಾಯಗಳಲ್ಲೂಈ ನಡೆ ಅನುಸರಿಸಲಾಗುತ್ತಿದೆ.

ಆಚರಣೆ ಮೌಢ್ಯ
ಮಹಿಳೆಯರು ಋುತುಕಾಲ (ಮುಟ್ಟು) ಹಾಗೂ ಬಾಣಂತನದಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ನೋವು ಅನುಭವಿಸುತ್ತಿರುತ್ತಾರೆ. ಕೆಲಸ ಮಾಡಬಾರದೆಂದರೆ ಸುಮ್ಮನೆ ಕೂರಲ್ಲ, ಕೂರಲು ಪುರುಷ ಪ್ರಧಾನ ಸಮಾಜ, ಕುಟುಂಬ ಬಿಡುವುದಿಲ್ಲವೆಂದು ‘ಹೊರಕ್ಕೆ’ ಕೂರುವುದನ್ನು ಅಲಿಖಿತ ಸಂಪ್ರದಾಯವಾಗಿ ಆಚರಿಸಿಕೊಂಡು ಬರಲಾಗಿತ್ತು. ನಾಗರಿಕ ಸಮಾಜದಲ್ಲಿಆ ಆಚರಣೆಯ ಅಂಧಕಾರತೆ ಮೌಢ್ಯವಾಗಿ ಪರಿಣಮಿಸಿದೆ. ಮನೆಯಲ್ಲೇ ವಿಶ್ರಾಂತಿ ನೀಡುವ ಅವಕಾಶಗಳು, ಪ್ರತ್ಯೇಕ ಕೊಠಡಿ ವ್ಯವಸ್ಥೆಗಳಿದ್ದರೂ ಗ್ರಾಮದಿಂದ ಹೊರಕ್ಕೆ ಹಾಕುತ್ತಿರುವುದು ಎಲ್ಲರೂ ಸಹಿಸಿಕೊಳ್ಳುತ್ತಿರುವ ದೌರ್ಜನ್ಯವಷ್ಟೇ.

ಜಾಗೃತಿ ಮೂಡಿಸುವ ಅಗತ್ಯ
ಬುಡಕಟ್ಟು ಸಮುದಾಯಗಳ ಪ್ರಮುಖ ಲಕ್ಷಣಗಳಲ್ಲಿ ಸಾಮಾಜಿಕ ಪ್ರತ್ಯೇಕತೆಯೂ ಒಂದು. ಸಮುದಾಯದಲ್ಲಿ ವ್ಯಾಪಕ ಅರಿವು ಅಗತ್ಯವಿದೆ. ಶಿಕ್ಷಣದಿಂದ ಬದಲಾವಣೆ ಸಾಧ್ಯ. ಹೀಗಾಗಿ ಸರಕಾರ ಜಾಗೃತಿ ಮೂಡಿಸುವ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಮಾಡಬೇಕು. ಅಲ್ಲದೆ ಸಮುದಾಯದ ಹೆಣ್ಣುಮಕ್ಕಳು ಶಾಲಾ ಹಂತದಿಂದ ವಿದ್ಯಾರ್ಥಿ ನಿಲಯದಲ್ಲಿದ್ದು ವ್ಯಾಸಂಗ ಮಾಡಿದರೆ ಬದಲಾವಣೆ ಸಾಧ್ಯವಿದೆ.

ವಿದ್ಯಾಭ್ಯಾಸದ ಸಂದರ್ಭದಲ್ಲಿ ಮನೆಯ ಕಡೆಗೇ ಹೋಗುವುದು ಕಡಿಮೆಯಾದಾಗ ಇಂತಹ ಆಚರಣೆಗಳು ಕಡಿಮೆಯಾಗುತ್ತವೆ. ಕೆಟಗರಿ 1, 2ಎ ನಲ್ಲಿಬರುವ 197 ಜಾತಿಗಳ ನಡುವೆ ಕಾಡುಗೊಲ್ಲ ಸಮುದಾಯದ ಮಕ್ಕಳು ಪೈಪೋಟಿ ನಡೆಸಿ ಸ್ಥಾನ ಪಡೆಯುವುದು ಕೂಡ ಸವಾಲು. ಇಷ್ಟೇ ಅಲ್ಲದೆ, ಶಿಕ್ಷಿತರೂ ಕೂಡ ಮೌಢ್ಯಕ್ಕೆ ಕಟಿಬದ್ಧರಾಗಿದ್ದಾರೆ. ಗುಬ್ಬಿ ತಾಲೂಕಿನಲ್ಲಿಅಂಗನವಾಡಿ ಕಾರ್ಯಕರ್ತೆಯೊಬ್ಬರು ಮುಟ್ಟಾದ ಕಾರಣಕ್ಕೆ ಅಂಗನವಾಡಿಗೆ ಹೋಗದೆ ಇರುವುದು ತಿಳಿದುಬಂದಿದೆ.

ಸಮುದಾಯದಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದಿರುವ ಆಚರಣೆ. ಮಹಿಳೆಯರಿಗೆ ಮುಟ್ಟು, ಹೆರಿಗೆ ಸಂದರ್ಭದಲ್ಲಿ ವಿಶ್ರಾಂತಿಗಾಗಿ ನಡೆಸಿಕೊಂಡು ಬಂದಿದ್ದು ಮೌಢ್ಯವಾಗಿ ಇಂದಿಗೂ ಮುಂದುವರಿದಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮನುಷ್ಯತ್ವಕ್ಕೆ ವಿರೋಧವಾದ ಯಾವುದೇ ಆಚರಣೆ ಇರಲಿ ಅದು ಖಂಡನೀಯ. ಇಂತಹ ಅನಿಷ್ಟ ಪದ್ಧತಿ 21ನೇ ಶತಮಾನದಲ್ಲೂ ಮುಂದುವರಿದಿರುವುದು ಬೇಸರದ ಸಂಗತಿ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಿದು. ಈ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪ್ರತಿಹಳ್ಳಿಗಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದೇವೆ ಬಿ. ಆರತಿ ತಹಸೀಲ್ದಾರ್‌ (B Arathi Tahsildar), ಗುಬ್ಬಿ ಅವರು ತಿಳಿಸಿದರು.

ಮೇಘಾ ಮನೋಹರ ಕಂಪು

Exit mobile version