ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ: ಮಮತಾ ಬ್ಯಾನರ್ಜಿ

West Bengal : ಕೇಂದ್ರ ಸರ್ಕಾರ ಪ್ರಸ್ತುತ ಪಡಿಸಿದ ಬಜೆಟ್ 2023(Budget 2023) ಅನ್ನು ಬಡವರ ವಿರೋಧಿ ಬಜೆಟ್‌ ಎಂದು ಪಶ್ಚಿಮ ಬಂಗಾಳ (Mamata Banerjee budget opinion) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerji) ಆರೋಪಿಸಿದ್ದಾರೆ.


ಕೇಂದ್ರ ಸರ್ಕಾರ ಘೋಷಿಸಿದ ಬಜೆಟ್‌ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಹಣದುಬ್ಬರದ ಕಾರಣ,

ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಮಾಡಿದ ಬದಲಾವಣೆಗಳು ಸಂಬಳ ಪಡೆಯುವ ವರ್ಗಕ್ಕೆ ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ.

ಕೇಂದ್ರ ಸರ್ಕಾರದ ಈ ಬಜೆಟ್ ಭವಿಷ್ಯವಲ್ಲದ ಮತ್ತು ಅವಕಾಶವಾದಿ ಬಜೆಟ್‌ ಮತ್ತು 2024ರ ರಾಷ್ಟ್ರೀಯ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶಕ್ಕಾಗಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಜೆಟ್‌ ಸಂಪೂರ್ಣವಾಗಿ ಅವಕಾಶವಾದಿಯಾಗಿದೆ! ಭರವಸೆಯ ಆಶಯ ಹೊಂದಿಲ್ಲ.

ಇದು ಕೇವಲ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಮಾಡಿರುವ ಬಜೆಟ್‌ ಆಗಿದೆ.

ಇದು ಬಡವರ ವಿರೋಧಿ ಬಜೆಟ್. ಈ ಬಜೆಟ್ ಅನ್ನು ಕೇವಲ 30 ನಿಮಿಷಗಳಲ್ಲಿ ಸಿದ್ಧಪಡಿಸಬಹುದಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಡವರು ಮತ್ತು ಜನಸಾಮಾನ್ಯರಿಗಾಗಿ ಬಜೆಟ್ ಅನ್ನು ಹೇಗೆ ಸಿದ್ಧಪಡಿಸಬೇಕು ಮತ್ತು ಬೆಲೆ ಏರಿಕೆಯನ್ನು ಹೇಗೆ ತಡೆಯಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ.

ನಾವೂ ಕೂಡ ರಾಜ್ಯ ಸರ್ಕಾರದ ಬಜೆಟ್ ಸಿದ್ಧಪಡಿಸುತ್ತೇವೆ. ಆದರೆ ನಾವು ತೆರಿಗೆಯನ್ನು(Tax) ಎಂದಿಗೂ ಹೆಚ್ಚಿಸುವುದಿಲ್ಲ.

ನಾನು ಈ ಬಜೆಟ್ ಅನ್ನು ಖಂಡಿಸುತ್ತೇನ! ಇದು ಜನಪರವಿಲ್ಲ, ಜನರಿಗೆ ಯಾವುದೇ ಪ್ರಯೋಜನ ನೀಡುವಂತಿಲ್ಲ. ಕೇವಲ ಸುಳ್ಳು ಪ್ರಚಾರವನ್ನು ಆಧರಿಸಿದೆ.

ಈ ಕೇಂದ್ರ ಬಜೆಟ್‌ 2024ರ ಚುನಾವಣೆಯನ್ನು ಗೆಲ್ಲುವ ಉದ್ದೇಶವನ್ನು(Mamata Banerjee budget opinion) ಗುರಿಯಾಗಿರಿಸಿಕೊಂಡು ರೂಪಿಸಲಾಗಿದೆ.

ಕೇಂದ್ರ ಬಜೆಟ್‌ನಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದವಿಲ್ಲ! ಕೇಂದ್ರ ಸರ್ಕಾರ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಹೂಡಿಕೆ ಮಾಡುತ್ತಿದ್ದಾರೆ.

ಕಳೆದ ವರ್ಷ, 100 ದಿನಗಳ ಕೆಲಸದ ಯೋಜನೆಗೆ ಬಜೆಟ್ ಹಂಚಿಕೆಯನ್ನು ಕಡಿತಗೊಳಿಸಲಾಯಿತು.

ಈ ವರ್ಷ ಅದನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ದುಡಿದವರಿಗೆ ಕೂಲಿ ಕೊಟ್ಟಿಲ್ಲ ಎಂದು ಆರೋಪಿಸಿದರು.

 ಇದನ್ನೂ ಓದಿ: ಬಜೆಟ್‌ನಲ್ಲಿ ಮೋದಿ ಸರ್ಕಾರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ : ಸಿದ್ದರಾಮಯ್ಯ

ಕೇಂದ್ರ ಬಜೆಟ್ ಅನ್ನು ಟೀಕಿಸುವ ಹಕ್ಕು ಮುಖ್ಯಮಂತ್ರಿಗೆ ಇಲ್ಲ. ಅವರ ಸರ್ಕಾರವು ಪಶ್ಚಿಮ ಬಂಗಾಳದ ಆರ್ಥಿಕತೆಯನ್ನು ದುರ್ಬಲಗೊಳಿಸಿದೆ.

ಕೇಂದ್ರದ ನಿಧಿಯಿಂದ ಹಣವನ್ನು ಹೇಗೆ ಕಸಿದುಕೊಳ್ಳುವುದು, ಅಕ್ರಮವಾಗಿ ಉದ್ಯೋಗಗಳನ್ನು ನಗದಿಗೆ ಮಾರಾಟ ಮಾಡುವುದು ಮತ್ತು ರಾಜ್ಯದ ಉದ್ಯೋಗಿಗಳಿಗೆ ಸರಿಯಾದ ತುಟ್ಟಿಭತ್ಯೆಯಿಂದ ವಂಚಿತಗೊಳಿಸುವುದು ಹೇಗೆ ಎಂಬುದಕ್ಕೆ ಮಾತ್ರ ಅವರ ಪಕ್ಷವು ಬಜೆಟ್‌ಗಳನ್ನು ರೂಪಿಸುವಲ್ಲಿ ಸಮರ್ಥವಾಗಿದೆ ಎಂದು ಬಿಜೆಪಿ ನಾಯಕ ರಾಹುಲ್ ಸಿನ್ಹಾ, ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Exit mobile version