Yati Narasimhanand : ಚೀನಾ ಮಾಡುವಂತೆ ಎಲ್ಲಾ ಮದರಸಾಗಳನ್ನು ಸ್ಫೋಟಿಸಬೇಕು : ಯತಿ ನರಸಿಂಹಾನಂದ

Aligarh : ವಿವಾದಾತ್ಮಕ ವಾಗ್ಮಿ ಯತಿ ನರಸಿಂಹಾನಂದ ಸರಸ್ವತಿ ಅವರು “ಗನ್ ಪೌಡರ್” ಬಳಸಿ ಉತ್ತರ ಪ್ರದೇಶದಲ್ಲಿರುವ(Yati Narasimhanand controversial statement) ಮದರಸಾಗಳನ್ನು ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ.

Statement - Yati Narasimhanand controversial statement

ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲಿಘರ್ಗೆ(Aligarh) ಆಗಮಿಸಿದ್ದ ಅವರು, ಉತ್ತರ ಪ್ರದೇಶ ಸರ್ಕಾರ ಮಾನ್ಯತೆ ಪಡೆಯದ ಮದರಸಾಗಳ ಕುರಿತು ನಡೆಸುತ್ತಿರುವ ಸಮೀಕ್ಷೆಯ(Survey) ಕುರಿತು ಮಾತನಾಡಿ, ಮದರಸಾದಂತಹ ಸಂಸ್ಥೆ ಇರಬಾರದು.

ಇದನ್ನೂ ಓದಿ : https://vijayatimes.com/president-of-india-attends-queens-funeral/

ಚೀನಾ(China) ಮಾಡುವಂತೆ ಎಲ್ಲಾ ಮದರಸಾಗಳನ್ನು ಗನ್ಪೌಡರ್ನಿಂದ ಸ್ಫೋಟಿಸಬೇಕು. ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು, ಅಲ್ಲಿ ಅವರ ಮೆದುಳಿನಿಂದ ಕುರಾನ್ ಎಂಬ ವೈರಸ್ ಅನ್ನು ತೆಗೆದುಹಾಕಬೇಕು. ಇನ್ನು ಮದರಸಾಗಳಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು ಸ್ಫೋಟಿಸಬೇಕು.

ಅದರ ವಿದ್ಯಾರ್ಥಿಗಳನ್ನು ಬಂಧನ ಕೇಂದ್ರಗಳಿಗೆ ಕಳುಹಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ನೀಡಬೇಕು ಎಂದು ವಿವಾದಾತ್ಮಕ ಹೇಳಿಕೆ(Controversial Statement) ನೀಡಿರುವ ವಿಡಿಯೋ(Video) ಎಲ್ಲೆಡೆ ವೈರಲ್‌(Viral) ಆಗಿದೆ. ಯತಿ ನರಸಿಂಹಾನಂದ ಅವರು ದ್ವೇಷಪೂರಿತ ಭಾಷಣದ ಆರೋಪಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ.

ಕಳೆದ ವರ್ಷ ಹರಿದ್ವಾರದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣದಲ್ಲಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಮಹಾತ್ಮಾ ಗಾಂಧಿ(Mahatma Gandhi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಯತಿ ನರಸಿಂಹಾನಂದ್ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು.

“ಒಂದು ಕೋಟಿ ಹಿಂದೂಗಳ ಹತ್ಯೆಗೆ ಮಹಾತ್ಮ ಗಾಂಧಿ ಕಾರಣ” ಎಂದು ಹೇಳಿಕೆ ನೀಡಿ ಬಂಧನವಾಗಿದ್ದರು. ಇದೇ ವೇಳೆ ಅವರು ಕಾಂಗ್ರೆಸ್‌ ಪಕ್ಷದ(Congress Party) ಭಾರತ್‌ ಜೋಡೋ(Bharat Jodo Yatra) ಯಾತ್ರೆಯ ಕುರಿತು ಮಾತನಾಡಿ “ರಾಹುಲ್ ಗಾಂಧಿ(Rahul Gandhi) ಭಾರತವನ್ನು ಒಗ್ಗೂಡಿಸಲು ಬಯಸಿದರೆ,

ಇದನ್ನೂ ಓದಿ : https://vijayatimes.com/difference-between-cheetah-and-leopard/

ಅವರು ಮಹಾತ್ಮ ಗಾಂಧಿಯವರು ನಿರ್ಮಿಸಿದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೋಗಬೇಕು. ಮೊದಲು ಪಾಕಿಸ್ತಾನ, ಬಾಂಗ್ಲಾದೇಶವನ್ನು ಭಾರತದೊಂದಿಗೆ ಜೋಡಿಸಬೇಕು” ಎಂದು ಲೇವಡಿ ಮಾಡಿದ್ದರು.
Exit mobile version