ತುಮಕೂರು ಬಸ್ ಅಪಘಾತ ; 8 ಜನರ ದರ್ಮರಣ!

bus

ತುಮಕೂರು : ತುಮಕೂರು(Tumkur) ಜಿಲ್ಲೆಯ, ಪಳವಳ್ಳಿ ಕಟ್ಟೆ ಗ್ರಾಮದಲ್ಲಿ ಪ್ರೈವೆಟ್ ಬಸ್, ರಾತ್ರಿ ಸಂಚಾರದ ವೇಳೆ ಆಯಾ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರು ಅಪಘಾದಲ್ಲಿ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ 8 ಜನರು ಸಾವನಪ್ಪಿದ್ದಾರೆ ಮತ್ತು 25ಕ್ಕೂ ಹೆಚ್ಚು ಜನರು ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಪ್ರಕರಣ ಪಾವಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅತಿಯಾದ ವೇಗವಾಗಿ ಬಸ್ ಚಾಲನೆ ಜೊತೆಗೆ ಓವರ್‍ಲೋಡ್ ಮಾಡಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ ಟಾಪ್ ಮೇಲೆ ಪ್ರಯಾಣಿಕರನ್ನು ಹತ್ತಿಸಿಕೊಂಡು ವಾಹನ ಚಲಾಯಿಸುವುದಲ್ಲದೇ, ಅತಿ ವೇಗದಲ್ಲಿ ಬಸ್ ಚಾಲನೆ ಮಾಡಿರುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ! ಕರೆಯ ಏರಿ ಮೇಲೆ ಹತ್ತಿದ್ದ ಬಸ್, ಕರೆಯ ತಿರುವಿನಲ್ಲಿ ಕಂಟ್ರೋಲ್‍ಗೆ ಸಿಗದೆ ಪಲ್ಟಿ ಹೊಡೆದಿದೆ!

ಈ ಕಾರಣ ಬಸ್‍ನಲ್ಲಿದ್ದ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗಳಿಗೆ ತುತ್ತಾದರೆ, 8 ಮಂದಿ ಸಾವನಪ್ಪಿದ್ದಾರೆ. ಗಾಯಾಳುಗಳನ್ನು ಪಾವಗಡ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸುತ್ತಿದ್ದಂತೆ, ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಶೀಘ್ರವೇ ಪರಾರಿಯಾಗಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಜನರು ದೌಡಾಯಿಸಿದ್ದು, ಜನರು ಚದುರಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ.

Exit mobile version