ಹೆಣ್ಣು ಮಕ್ಕಳಿಗೆ ಬ‍ಟ್ಟೆ ಕೊಡಿಸುತ್ತೇನೆ ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಈ `ವಿಕೃತ ಕಾಮಿಗೆ’ ಏನಾಯ್ತು ಗೊತ್ತಾ?

ಬೆಂಗಳೂರಿನ ಪ್ರಮುಖ ನಗರಗಳಲ್ಲಿ ತನ್ನ ಕೆಟ್ಟ ಕಾಮ ಬುದ್ದಿಯನ್ನ ಅಮಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ಎಸಗುತ್ತಿದ್ದವನನ್ನು ಸದ್ಯ ಬಂಧಿಸಲಾಗಿದೆ(culprit arrested sexual harrasment).

ನಿರ್ಗತಿಕ, ಅಸಹಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ನಗರದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡು ಅವರನ್ನು ಗುರಿಯಾಗಿಸಿಕೊಂಡು, ಸಮಯಕ್ಕೆ ಕಾದು, ತನ್ನ ಕುತಂತ್ರ ಬುದ್ಧಿಯನ್ನು ಅವರ ಮೇಲೆ ಪ್ರಯೋಗಿಸುತ್ತಿದ್ದ ಇಮ್ತಿಯಾಜ್ ಅಹ್ಮದ್.

ಇಮ್ತಿಯಾಜ್ ಅಹ್ಮದ್ ಎಂಬಾತ ಅಪ್ರಾಪ್ತ ಹೆಣ್ಣು ಮಕ್ಕಳ ಬಳಿ ಬಂದು ಬಟ್ಟೆ ಕೊಡಿಸುವ ನೆಪದಲ್ಲಿ ಅವರನ್ನು ಮರುಳು ಮಾಡಿ ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಅಮಾಯಕ, ಅಸಹಾಯಕ ಹೆಣ್ಣು ಮಕ್ಕಳೇ ಇತನ ಟಾರ್ಗೆಟ್! ಇತ್ತೀಚಿಗೆ ಕೆಜಿ ಹಳ್ಳಿಗೆ ಹೋಗಿದ್ದು, ಅಲ್ಲಿನ ಹೆಣ್ಣು ಮಗಳನ್ನು ಇದೇ ರೀತಿ ಮೋಡಿ ಮಾಡಿ, ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ.

https://www.youtube.com/watch?v=OAQyGDO_MwE

ಈ ಬಗ್ಗೆ ಕೆಜಿ ಹಳ್ಳಿ ಪೊಲೀಸರು ಮಾಹಿತಿ ತಿಳಿದು ಇವನಿಗೆ ಸೂಕ್ತ ಶಿಕ್ಷೆ ವಿಧಿಸುವುದರ ಜೊತೆಗೆ ತನಿಖೆ ಕೈಗೊಂಡಿದ್ದಾರೆ.

Culprit

ಈ ವೇಳೆ ತಿಳಿದುಬಂದಿದ್ದು, ಈ ಹಿಂದೆ ಈ ವಿಕೃತ ಕಾಮಿ, ಇದೇ ಮೊದಲ ಬಾರಿಗೆ ನಡೆಸದೆ ಹಲವು ಬಾರಿ ಹೆಬ್ಬಾಳ, ಹೆಗ್ಗಡೆನಗರ, ಗೋವಿಂದಪುರ, ಯಲಹಂಕ ಸೇರಿದಂತೆ ಅನೇಕ ನಗರಗಳಲ್ಲಿ ತನ್ನ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ.

https://vijayatimes.com/banana/

ಅಪ್ರಾಪ್ತ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈತ ಮಾಡುತ್ತಿದ್ದ ಲೈಂಗಿಕ ದೌರ್ಜನ್ಯ ಹೊರಬಂದಿದ್ದು, ಈ ಹಿಂದೆ ಆರೋಪಿ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಅಡಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ(culprit arrested sexual harrasment).

ಸದ್ಯ ಪೊಲೀಸರು ಇತನನ್ನು ಅರೆಸ್ಟ್ ಮಾಡಿರುವ ಬಗ್ಗೆ ಕೆಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಇಂಥವರನ್ನು ಬದುಕಲು ಬಿಡಬೇಡಿ ಎಂದು ಹೇಳಿದ್ದಾರೆ. ಒಟ್ಟಾರೆ ಆರೋಪಿ ಈಗ ಪೊಲೀಸರ ತನಿಖೆಯಲ್ಲಿ ಸಿಲುಕಿಕೊಂಡಿದ್ದಾನೆ.
Exit mobile version