Bangalore (ಜು.7):ನಮ್ಮ ರಾಜ್ಯವು ಜಿಎಸ್ಡಿ ತೆರಿಗೆ ಸಂಗ್ರಹಣೆಯಲ್ಲಿ ದೇಶದ ದೊಡ್ಡ ರಾಜ್ಯಗಳ ಪೈಕಿ ಶೇ. 21ರಷ್ಟು ಬೆಳವಣಿಗೆ ದರ ಪ್ರಸಕ್ತ ವರ್ಷದ (Karnataka budget high tax) ಮೊದಲ
ತ್ರೈಮಾಸಿಕದಲ್ಲಿ ಸಾಧಿಸಿದೆ. ಕರ್ನಾಟಕದ ಜಿಎಸ್ಟಿ ರಾಜಸ್ವ ಸಂಗ್ರಹವು ಪ್ರಸ್ತುತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 18,962 ಕೋಟಿ ರೂಪಾಯಿ ಆಗಿದೆ.ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ,
ಗಣಿ ಮತ್ತು ಭೂವಿಜ್ಞಾನ ಹಾಗೂ ರೋಡ್ ಟ್ಯಾಕ್ಸ್ಅನ್ನು (Road Tax) ಸರ್ಕಾರದ ಗ್ಯಾರಂಟಿ (Guranatee) ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳಿಗೆ ಹಣಕಾಸು ನೆರವು
ನೀಡುವ ಸಲುವಾಗಿ ಏರಿಕೆ ಮಾಡುವ ನಿರ್ಧಾರ ಮಾಡಲಾಗಿದೆ.

14ನೇ ಬಾರಿಗೆ ಸಿದ್ಧರಾಮಯ್ಯ ದಾಖಲೆಯ ಬಜೆಟ್ ಮಂಡನೆ ಮಾಡಿದ್ದು (Karnataka Budget 2023) ಮದ್ಯದ ಮೇಲಿನ ಸುಂಕವನ್ನು ಪ್ರಮುಖವಾಗಿ ಶೇ. 20ರಷ್ಟು ಏರಿಕೆ ಮಾಡಿದ್ದಾರೆ.
ಅದೇ ರೀತಿ ಆದಾಯವನ್ನು ಏರಿಸುವ ಗುರಿಯನ್ನು ಇನ್ನೂ ಕೆಲವು ವಸ್ತುಗಳ ತೆರಿಗೆ ಪರಿಷ್ಕರಣೆ ಮಾಡುವ ಮೂಲಕ ಇರಿಸಿಕೊಂಡಿದ್ದಾರೆ.
ಮನೆ ಖರೀದಿ ಮಾಡುವ ಯೋಚನೆಯಲ್ಲಿದ್ದವರಿಗೆ ಅದರೊಂದಿಗೆ ಇನ್ನಷ್ಟು ಹೊರೆಯಾಗುವುದು ಖಚಿತವಾಗಿದೆ. ಆದರೆ ಪರಿಷ್ಕರಣೆ ಎಷ್ಟು ಪ್ರಮಾಣದಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ.
ಅದರೊಂದಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 25 ಸಾವಿರ ಕೋಟಿ ರಾಜಸ್ವ ಸಂಗ್ರಹಣೆ 2023-24ನೇ ಸಾಲಿನಲ್ಲಿ ಗುರಿ ನಿಗದಿ ಮಾಡಲಾಗಿದೆ.
ಗ್ರ್ಯಾನೈಟ್, ಮರಳು, ಎಂಸ್ಯಾಂಡ್, ಕಲ್ಲಿನ ಬೆಲೆಗಳಲ್ಲಿ ಏರಿಕೆ:
ಗಣಿ ಮತ್ತು ಭೂವಿಜ್ಞಾನ ಕ್ಷೇತ್ರದಿಂದ 9,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಮನೆ ಕಟ್ಟಲು ಬೇಕಾಗಿರುವ ಅವಶ್ಯಕ ವಸ್ತುಗಳಾಗಿರುವ ಗ್ರ್ಯಾನೈಟ್
(Granite), ಮರಳು, ಕಲ್ಲು ಹಾಗೂ ಎಂಸ್ಯಾಂಡ್ (M Sand) ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನು ಮೋಟಾರು ವಾಹನ ಕಾಯ್ದೆಯನ್ನು ಸರಳೀಕರಣಗೊಳಿಸಲು ಪ್ರಸ್ತಾಪ ಮಾಡಲಾಗಿದೆ ಅಷ್ಟೇ ಅಲ್ಲದೆ 11500 ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಕರ್ನಾಟಕ ಮೋಟಾರು
ವಾಹನ ನೋಂದಣಿ ತೆರಿಗೆ ಹೆಚ್ಚಳಕ್ಕೆ ಅದರೊಂದಿಗೆ ಉದ್ದೇಶಿಸಲಾಗಿದೆ. ಎಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಳ ಆಗುತ್ತದೆ ಎನ್ನುವ ಮಾಹಿತಿ (Karnataka budget high tax) ಇನ್ನೂ ಸಿಕ್ಕಿಲ್ಲ.

ಒಂದು ಪ್ರತ್ಯೇಕ ವಿಭಾಗವನ್ನು ಅತ್ಯಧಿಕ ತೆರಿಗೆ ಪಾವತಿದಾರರಿಗಾಗಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಸಿದ್ಧರಾಮಯ್ಯ (Siddaramaiah) ಹೇಳಿದ್ದಾರೆ. ಪರಿಣಾಮಕಾರಿ ಬೆಂಗಳೂರು ಮತ್ತು
ಸುತ್ತಮುತ್ತಲ ಜಿಲ್ಲೆಗಳಲ್ಲಿ ನಾಲ್ಕು ಹೊಸ ವಿಭಾಗಗಳನ್ನು ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ ಉತ್ತಮ ಸಂಪರ್ಕ ನೀಡಲು ಶೀಘ್ರದಲ್ಲಿಯೇ ಕಾರ್ಯೋನ್ಮುಖಗೊಳಿಸಲಾಗುವುದು.
ವಾಣಿಜ್ಯ ತರಿಗೆ ಇಲಾಖೆಯ 2023-24ನೇ ಸಾಲಿಗೆ ರಾಜಸ್ವ ಸಂಗ್ರಹಣೆ ಗುರಿಯನ್ನು 1,01,000 ಕೋಟಿ ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಬಿಯರ್ (Beer) ಮೇಲೆ ಶೇ 10ರಷ್ಟು ಮತ್ತು ಮದ್ಯದ
ಮೇಲೆ ಶೇ 20ರಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕ ಶೇ 175 ರಿಂದ 185ಕ್ಕೆ ಇದರೊಂದಿಗೆ ಹೆಚ್ಚಳವಾಗಲಿದೆ. ಅಬಕಾರಿ ಇಲಾಖೆಗೆ 36 ಸಾವಿರ
ಕೋಟಿ ರೂಪಾಯಿ 2023-24ರ ಸಾಲಿನಲ್ಲಿ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿ ಮಾಡಲಾಗಿದೆ.
ಸಿರಾಸ್ಥಿ ಮಾರ್ಗಸೂಚಿ ದರ ಪರಷ್ಕರಣೆ ಖಚಿತ:
ಬಜೆಟ್ನಲ್ಲಿ (Budget) ಎಲ್ಲ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಕೋವಿಡ್ (Covid) ಸಾಂಕ್ರಾಮಿಕದ ಕಾರಣ
2019ರ ನಂತರ ಪರಿಷ್ಕರಿಸಿರಲಿಲ್ಲ. ಮಾರುಕಟ್ಟೆ ದರದಲ್ಲಿ ಪ್ರಸ್ತುತ ವ್ಯತ್ಯಾಸವಾಗಿರುವುದರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ರಶ್ಮಿತಾ ಅನೀಶ್